ಜಿಂಬಾಬ್ವೆ ಟೂರ್ ನಲ್ಲಿ ಶುಬ್ನಂ ಗಿಲ್ ಯಶಸ್ಸಿಗೆ ಕಾರಣ ಯುವರಾಜ್ ಸಿಂಗ್!

ಮಂಗಳವಾರ, 23 ಆಗಸ್ಟ್ 2022 (16:03 IST)
ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಯುವ ಬ್ಯಾಟಿಗ ಶುಬ್ನಂ ಗಿಲ್ ಯಶಸ್ಸಿಗೆ ಕಾರಣ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅಂತೆ!

ಹೀಗಂತ ಗಿಲ್ ಮೂರನೇ ಏಕದಿನದ ಬಳಿಕ ಬಹಿರಂಗಪಡಿಸಿದ್ದಾರೆ. ಜಿಂಬಾಬ್ವೆಯ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಗಿಲ್ ಅತ್ಯುತ್ತಮ ಬ್ಯಾಟಿಂಗ್ ನಿರ್ವಹಣೆ ತೋರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇದರಲ್ಲಿ ಒಂದು ಶತಕವೂ ಸೇರಿದೆ.

ಈ ಯಶಸ್ಸಿಗೆ ಯುವರಾಜ್ ಸಿಂಗ್ ಪ್ರೋತ್ಸಾಹ ಕಾರಣ ಎಂದಿದ್ದಾರೆ ಗಿಲ್. ‘ಜಿಂಬಾಬ್ವೆ ಸರಣಿಗೆ ಮೊದಲು ನಾನು ಯುವರಾಜ್ ಸಿಂಗ್ ರನ್ನು ಭೇಟಿಯಾಗಿದ್ದೆ. ಯುವಿ ಪಾ ನನಗೆ ನೀನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೀಯಾ, ಆದರೆ ಸೆಟ್ ಆದ ಮೇಲೆ ಹೆಚ್ಚು ಕಾಲ ಕ್ರೀಸ್ ನಲ್ಲಿರಲು ನೋಡಬೇಕು. ನೀನು ಶತಕವನ್ನೂ ಗಳಿಸಬಹುದು ಎಂದು ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದೇ ಅವರು’ ಎಂದು ಗಿಲ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ