ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿ ವಿಚಾರಣೆ ಎದುರಿಸುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ, ತಿಹಾರ್ ಜೈಲಿನಲ್ಲಿರುವಾಗ ಅವರ ಮೇಲೆ ಜೈಲಿನಲ್ಲಿದ್ದ ಕೈದಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿದ್ದ ಎಂದು ಕುಟುಂಬದ ಮೂಲಗಳು ಆರೋಪಿಸಿವೆ.
ಶ್ರೀಶಾಂತ್ ಸಹೋದರಿಯ ಪತಿ ಮಧು ಬಾಲಕೃಷ್ಣನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಶ್ರೀಶಾಂತ್ 26 ದಿನಗಳ ಕಾಲ ಜೈಲಿನಲ್ಲಿ ಕಳೆದು ಮೇ 2013 ರಲ್ಲಿ ಹೊರಬಂದಿದ್ದರು. ಇದೀಗ ಅವರ ಭಾವ ಖ್ಯಾತ ಹಿನ್ನೆಲೆ ಗಾಯಕ ಬಾಲಕೃಷ್ಣನ್ ಜೈಲಿನಲ್ಲಿ ನಡೆದ ಘಟನೆಯನ್ನು ಬಹಿರಂಗಗೊಳಿಸಿದ್ದಾರೆ.