ಸಂಪ್ರದಾಯದ ಪ್ರಕಾರ, ಐಸಿಸಿ ಅಧ್ಯಕ್ಷ ಮುಸ್ತಫಾ ಕಮಲ್ ಟ್ರೋಫಿಯನ್ನು ನಾಯಕನಿಗೆ ಹಸ್ತಾಂತರಿಸಬೇಕಿತ್ತು. ಬಾಂಗ್ಲಾ ಮೂಲದವರಾದ ಕಮಲ್'' ಅಂಪೇರ್ಗಳು ಪಕ್ಷಪಾತ ಮಾಡಿದರು. ನಮ್ಮ ರಾಷ್ಟ್ರವನ್ನು ಪಂದ್ಯಾವಳಿಯಿಂದ ದೂಡುವ ಉದ್ದೇಶಪೂರ್ವಕ ಪ್ರಯತ್ನ ಎಂದು ಟೀಕಿಸಿದ್ದರು. ಮಾನವ ತಪ್ಪುಗಳು ಸಾಧ್ಯ. ಆದರೆ ಬಾಂಗ್ಲಾದೇಶದ ವಿರುದ್ಧ ಹತ್ತಾರು ತೀರ್ಪುಗಳು ಹೇಗೆ ಬರುತ್ತವೆ? ಇದು ನಿಜವಾಗಲೂ ಕಳಪೆ ಅಂಪೈರಿಂಗ್'' ಎಂದು ಕಿಡಿಕಾರಿದ್ದರು.