ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಶ್ರೀಲಂಕಾ ವಿರುದ್ಧ ಆಗಸ್ಟ್ 20ರಂದು ಪಿಎಸ್ಎಸ್ ಓವಲ್ನಲ್ಲಿ ಎರಡನೇ ಟೆಸ್ಟ್ ಆರಂಭವಾಗುವುದಕ್ಕೆ ಮುಂಚೆ ಭಾರತದ ಟೆಸ್ಟ್ ತಂಡವನ್ನು ಸೇರಲಿದ್ದಾರೆ. ಈ ಬೆಳವಣಿಗೆ ಬಗ್ಗೆ ಬಿಸಿಸಿಐ ಟ್ವೀಟ್ ಮಾಡಿದ್ದು, ಯಾರ ಬದಲಿಗೆ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆಂಬ ಬಗ್ಗೆ ಪ್ರಸ್ತಾಪಿಸಿಲ್ಲ. ಭಾರತ ತಂಡದ ಕೆಲವು ಆಟಗಾರರು ಕೆಲವು ತೊಂದರೆಗಳಿಂದ ಬಳಲುತ್ತಿದ್ದರು.
ಮುರಳಿ ವಿಜಯ್ ಮಂಡಿರಜ್ಜು ನೋವಿನಿಂದ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರೆ, ಶಿಖರ್ ಧವನ್ ಮೊದಲ ದಿನ ಕ್ಯಾಚ್ ಡ್ರಾಪ್ ಮಾಡಿದ ಬಳಿಕ ಗಾಯಗೊಂಡ ಕೈಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಯಾವುದೇ ಆಟಗಾರನಿಗೆ ಗಾಯವಾಗಿಲ್ಲ ಮತ್ತು ಬಿನ್ನಿಯನ್ನು 15 ಮಂದಿಯ ತಂಡಕ್ಕೆ ಮಾತ್ರ ಸೇರಿಸಲಾಗಿದೆ ಎಂದು ವರದಿಯೊಂದು ಹೇಳುತ್ತಿದೆ.