ಕೊಲ್ಕತ್ತಾ ನೈಟ್ ರೈಡರ್ಸ್ ಸ್ಪಿನ್ನರ್ ಸುನಿಲ್ ನಾರಾಯಣ್ ಅವರ ಬೌಲಿಂಗ್ ಶೈಲಿಗೆ ಐಸಿಸಿ ಹಸಿರು ನಿಶಾನೆ ನೀಡಿದ್ದರೂ ವೆಸ್ಟ್ ಇಂಡೀಸ್ ಆಟಗಾರ ಚೆನ್ನೈನಲ್ಲಿ ಇನ್ನೊಂದು ಪರೀಕ್ಷೆಗೆ ಹಾಜರಾಗಬೇಕು ಎಂದು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಬುಧವಾರ ತಿಳಿಸಿದರು. ಚೆನ್ನೈನ ಶ್ರೀ ರಾಮಚಂದ್ರ ವಿವಿಯಲ್ಲಿ ಈ ಪರೀಕ್ಷೆ ನಡೆಯುತ್ತದೆ ಎಂದು ದಾಲ್ಮಿಯಾ ಕಚೇರಿ ತಿಳಿಸಿದೆ.