ನಾರಾಯಣ್ ಅವರ ಬೌಲಿಂಗ್ ಶೈಲಿಯನ್ನು ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ವರದಿ ಮಾಡಲಾಗಿತ್ತು. ಅಂತಿಮ ಎಚ್ಚರಿಕೆ ನೀಡಿದ ಬಳಿಕ ಬಿಸಿಸಿಐ ಅವರನ್ನು ಆರೋಪಮುಕ್ತಗೊಳಿಸಿತ್ತು. ಆದರೆ ಐಸಿಸಿ ಪರಿಶೀಲನೆಯಲ್ಲಿ ಅವರ ಎಸೆತಗಳ ಎಲ್ಲಾ ವಿಧಗಳು 15 ಡಿಗ್ರಿ ಮಟ್ಟವನ್ನು ಮೀರಿದ್ದು ಪತ್ತೆಯಾಗಿದೆ. ಶ್ರೀಲಂಕಾ ವಿರುದ್ಧ ಪಲ್ಲೆಕೆಲೆಯಲ್ಲಿ ಮೂರನೇ ಏಕದಿನ ಪಂದ್ಯದಲ್ಲಿ ನಾರಾಯಣ್ ಅಕ್ರಮ ಬೌಲಿಂಗ್ ಶೈಲಿ ಮತ್ತೆ ವರದಿಯಾಗಿತ್ತು.