ಮೂಢನಂಬಿಕೆಗೆ ಒಳಗಾದ ಯುವರಾಜ್ ಸಿಂಗ್ ಮಾಡಿದ್ದೇನು ಗೊತ್ತಾ..?

ಸೋಮವಾರ, 26 ಜೂನ್ 2017 (12:25 IST)
ಕ್ರಿಕೆಟಿಗರು ಸಹ ಕೆಲ ಮೂಢನಂಬಿಕೆಗಳನ್ನ ಬಲವಾಗಿ ನಂಬಿರುತ್ತಾರೆ ಎಂಬುದಕ್ಕೆ ನಿನ್ನೆಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹಿರಿಯ ಕ್ರಿಕೆಟಿಗ ಯುವರಾಜ್ ಸಾಕ್ಷಿಯಾದರು.

ಹಾರ್ದಿಕ್ ಪಾಂಡ್ಯಾ ವಿಕೆಟ್ ಬಿದ್ದಾಗ ಕ್ರೀಸಿಗಿಳಿದ ಯುವರಾಜ್ ಸಿಂಗ್, ಹಿಂದಿನ ಚಾಂಪಿಯನ್ಸ್ ಟ್ರೋಫಿಯ ಜೆರ್ಸಿಯನ್ನೇ ತೊಟ್ಟು  ಕ್ರೀಸಿಗಿಳಿದಿದ್ದರು. ಆದರೆ, ಜೆರ್ಸಿ ಬದಲಾಯಿಸಿದ ಮಾತ್ರಕ್ಕೆ ಯುವಿ ಬ್ಯಾಟಿಂಗ್ ಭವಿಷ್ಯ ಬದಲಾಗಲಿಲ್ಲ. 14 ರನ್ ಗಳಿಸಿದ್ದ ಯುವಿ ಓಲ್ಡರ್ ಬೌಲಿಂಗ್`ನಲ್ಲಿ ಹೋಪ್`ಗೆ ಕ್ಯಾಚಿತ್ತು ನಿರ್ಗಮಿಸಿದರು.

ಯುವಿಯ ಕಳಪೆ ಪ್ರದರ್ಶನದ ಹೊರತಾಗಿಯೂ ಟೀಮ್ ಇಂಡಿಯಾ ಕೇವಲ 43 ಓವರ್`ಗಳಲ್ಲಿ 311 ರನ್`ಗಳ ಬೃಹತ್ ಗುರಿಯನ್ನ ವಿಂಡೀಸರಿಗೆ ನೀಡಿ ಗೆಲುವಿನ ಪತಾಕೆ ಹಾರಿಸಿತು. ಭಾರತದ ಬೃಹತ್ ಗುರಿ ಬೆನ್ನತ್ತಿದ್ದ ವಿಂಡೀಸ್ 6 ವಿಕೆಟ್ ಕಳೆದುಕೊಂಡು 43 ಓವರ್`ಗಳಲ್ಲಿ 205 ರನ್ ಗಳಿಸಲಷ್ಟೇ ಶಕ್ತವಾಯಿತು. 195 ರನ್`ಗಳ ಸೋಲನುಭವಿಸಿತು. ಆರಂಭದಲ್ಲೇ ವಿಂಡೀಸರನ್ನ ಕಾಡಿದ ಭುವಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ಮಿಂಚಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ