ವಿಶ್ವಕಪ್ ದೃಷ್ಟಿಯಿಂದ ಧೋನಿ, ಯುವಿ ಬಗ್ಗೆ ಬೇಗ ನಿರ್ಧಾರ ಕೈಗೊಳ್ಳಿ: ಬಿಸಿಸಿಐ ಆಡಳಿತ ಮಂಡಳಿಗೆ ದ್ರಾವಿಡ್ ಸಲಹೆ

ಬುಧವಾರ, 21 ಜೂನ್ 2017 (12:36 IST)
2019ರ ವಿಶ್ವಕಪ್ ತಂಡದಲ್ಲಿ ಆಡುವ ಕುರಿತಂತೆ ಮಾಜಿ ನಾಯಕ ಧೋನಿ ಮತ್ತು ಯುವರಾಜ್ ಸಿಂಗ್ ಕುರಿತಂತೆ ಬಹುಬೇಗ ನಿರ್ಧಾರ ಕೈಗೊಳ್ಳುವಂತೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬಿಸಿಸಿಐ ಆಡಳಿತ ಮಂಡಳಿಗೆ ಸಲಹೆ ನೀಡಿದ್ದಾರೆ.
 

ಮುಂದಿನ ಎರಡು ವರ್ಷಗಳಲ್ಲಿ ಈ ಇಬ್ಬರು ಕ್ರಿಕೆಟಿಗರ ಪಾತ್ರ ಬಹುಮುಖ್ಯವಾಗಿದೆ. ಇಬ್ಬರಿಗೂ ತಂಡದಲ್ಲಿ ಸ್ಥಾನವಿದೆಯೇ..? ಒಬ್ಬರಿಗೆ ಮಾತ್ರ ಸ್ಥಾನವಿದೆಯೇ..? ಎಂಬುದನ್ನ ವರ್ಷದ ಅವಧಿಯಲ್ಲಿ ಮರುಪರಿಶೀಲಿಸಬೇಕಾದ ಅಗತ್ಯವಿದೆ. ಲಭ್ಯವಿರುವ ಪ್ರತಿಭೆಗಳ ಬಗ್ಗೆ ಆಡಳಿತ ಮಂಡಳಿ ಮತ್ತು ಆಯ್ಕೆ ಸಮಿತಿ ಗಮನ ಹರಿಸಬೇಕು ಎಂದಿದ್ಧಾರೆ.

ಇದೇವೇಳೆ, ವೆಸ್ಟ್ ಇಂಡಿಸ್ ಸರಣಿಗೆ ಕುಲ್ದೀಪ್ ಯಾದವ್ ಮತ್ತು ರಿಶಬ್ ಪಂತ್`ಗೆ ಅವಕಾಶ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ದ್ರಾವಿಡ್, ಈ ರೀತಿಯ ಪ್ರಯೋಗ, ಯುವಕರಿಗೆ ಅವಕ಻ಶ ನೀಡುವ ಉತ್ತಮ ಬೆಳವಣಿಗೆ ಎಂದಿದ್ಧಾರೆ.

ಯುವಕರ ಎದುರು ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಧೋನಿ ಮತ್ತು ಯುವರಾಜ್ ಸಿಂಗ್ ಬಗ್ಗೆ ಬಿಸಿಸಿಐ ನಿರ್ಧಾರ ಕೈಗೊಳ್ಳಬೇಕಿದೆ. ಅವರು ಈಗಳು ಫಿಟ್ ಆಗಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಈ ಪ್ರಶ್ನೆ ಏಳುತ್ತಿರಲಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ