ತನ್ನ ಗುಂಡಿ ತಾನೇ ತೋಡಿಕೊಂಡಿದ್ದ ಟೀಂ ಇಂಡಿಯಾ!

ಮಂಗಳವಾರ, 28 ಫೆಬ್ರವರಿ 2017 (08:57 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಮೊದಲ ಟೆಸ್ಟ್ ಪಂದ್ಯ ಸೋಲಲು ಕಾರಣ ಯಾರು? ಸ್ವತಃ ಬಿಸಿಸಿಐ ಎನ್ನುತ್ತಿವೆ ಮೂಲಗಳು. ಅದು ಹೇಗೆ?


ಭಾರತ ಖ್ಯಾತ ಸ್ಪಿನ್ನರ್ ಗಳನ್ನು ಹೊಂದಿದೆ. ಎದುರಾಳಿಗಳಿಗೆ ಸ್ಪಿನ್ನರ್ ಗಳನ್ನು ಎದುರಿಸಲು ಗೊತ್ತಿಲ್ಲ. ಹೀಗಾಗಿ ಸ್ಪಿನ್ ಪಿಚ್ ಮಾಡಿದರೆ ಎದುರಾಳಿಗಳನ್ನು ಕಟ್ಟಿ ಹಾಕಬಹುದು ಎಂಬುದು ಬಿಸಿಸಿಐ ಲೆಕ್ಕಾಚಾರವಾಗಿತ್ತು. ಹಾಗಾಗಿ ಸ್ಪಿನ್ನರ್ ಗಳಿಗೆ ನೆರವಾಗುವಂತಹ ಪಿಚ್ ನ್ನು ತಯಾರಿಸಲು ಕ್ಯುರೇಟರ್ ಗಳಿಗೆ ಒತ್ತಡ ತಂದಿತ್ತು.

ಕ್ಯುರೇಟರ್ ಮಣಿಯದಿದ್ದಾಗ ಸ್ವತಃ ಬಿಸಿಸಿಐ ಆಡಳಿತ ಮಂಡಳಿಯೇ ಮಧ್ಯಪ್ರವೇಶಿಸಿ ತಮಗೆ ಬೇಕಾದ ಪಿಚ್ ನಿರ್ಮಿಸಿತ್ತು. ಹಾಗಾಗಿ ಪಿಚ್ ನಲ್ಲಿದ್ದ ಹುಲ್ಲು ಕಿತ್ತೆಸದು ಸಂಪೂರ್ಣ ತಿರುವಿನ ಪಿಚ್ ಮಾಡಲಾಯಿತು. ವಿಪರ್ಯಾಸವೆಂದರೆ ಭಾರತ ಕ್ರಿಕೆಟ್ ಮಂಡಳಿ ಮಾಡಿದ ಈ ಉಪಾಯ ಟೀಂ ಇಂಡಿಯಾಕ್ಕೇ ಮುಳುವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ