ವಿಂಡೀಸ್ ಸರಣಿಗೆ ಇಂದು ಟೀಂ ಇಂಡಿಯಾ ಆಯ್ಕೆ: ಆಯ್ಕೆಗಾರರಿಗೂ ಇದು ಕೊನೇ ಮೀಟಿಂಗ್!

ಗುರುವಾರ, 21 ನವೆಂಬರ್ 2019 (09:28 IST)
ಮುಂಬೈ: ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡದ ಆಯ್ಕೆ ಮಾಡಲು ಇಂದು ಎಂಎಸ್ ಕೆ ಪ್ರಸಾದ್ ನೇತೃತ್ವದ ಸಮಿತಿ ಸಭೆ ಸೇರಲಿದೆ.


ವಿಶೇಷವೆಂದರೆ ಮುಖ್ಯ ಆಯ್ಕೆಗಾರ ಎಂಎಸ್ ಕೆ ಪ್ರಸಾದ್ ಗೂ ಇದು ಕೊನೆ ಸಭೆಯಾಗುವ ಸಾಧ್ಯತೆಯಿದೆ. ಕಳೆದ ನಾಲ್ಕು ವರ್ಷಗಳಿಂದ ಮುಖ್ಯ ಆಯ್ಕೆಗಾರನಾಗಿ ಕಾರ್ಯನಿರ್ವಹಿಸಿದ ಪ್ರಸಾದ್ ಅವಧಿ ಕೊನೆಗೊಳ್ಳುತ್ತಿದ್ದು ಇದುವೇ ಅವರ ಕೊನೆಯ ಸಭೆಯಾಗುವ ಸಾಧ್ಯತೆಯಿದೆ.

ವಿಂಡೀಸ್ ಸರಣಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವುದು ಶಿಖರ್ ಧವನ್ ಕಳಪೆ ಫಾರ್ಮ್, ಮಯಾಂಕ್ ಅಗರ್ವಾಲ್ ಸೇರ್ಪಡೆ, ರಿಷಬ್ ಪಂತ್ ಭವಿಷ್ಯ ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ.  ಈ ನಿಟ್ಟಿನಲ್ಲಿ ಇಂದಿನ ಸಭೆ ಮಹತ್ವ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ