ಈ ಸೋಲಿನ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅನುಷ್ಕಾ ಮತ್ತು ವಿರಾಟ್ ಬಗ್ಗೆ ಹಾಸ್ಯ ಮಿಶ್ರಿತ ಟೀಕೆಗಳು ಪ್ರಾರಂಭವಾಗಿದ್ದವು. ಅನುಷ್ಕಾರವರಿಂದಲೇ ವಿರಾಟ್ ಆಟವಾಡದೇ ಬೇಗನೆ ಮರಳಿದರು. ಭಾರತ ತಂಡದ ಸೋಲಿಗೆ ಅನುಷ್ಕಾರವರೇ ಕಾರಣ ಎಂಬುದಾಗಿ ಸಾವಿರಾರು ಸಂದೇಶಗಳು ಹರಿದಾಡ ತೊಡಗಿದವು. ಈ ಹಿನ್ನೆಲೆಯಲ್ಲಿ ಅನುಷ್ಕಾ ಬೆನ್ನಿಗೆ ನಿಂತ ಬಾಲಿವುಡ್ ಭಾರತದ ಸೋಲಿಗೆ ಅನುಷ್ಕಾರವರನ್ನು ದೂಷಿಸುವುದನ್ನು ತಕ್ಷಣಕ್ಕೆ ನಿಲ್ಲಿಸಿ ಎಂದು ಹೇಳಿತ್ತು.