ಆರ್ ಸಿಬಿಗೂ ಕಪ್ ಗೆಲ್ಲುವ ಅರ್ಹತೆಯಿದೆ ಎಂದ ವಿರಾಟ್ ಕೊಹ್ಲಿ

ಶುಕ್ರವಾರ, 3 ಏಪ್ರಿಲ್ 2020 (10:11 IST)
ಬೆಂಗಳೂರು: ಕೆವಿನ್ ಪೀಟರ್ಸನ್ ಜತೆಗಿನ ಇನ್ ಸ್ಟಾಗ್ರಾಂ ಲೈವ್ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ.


ಆರ್ ಸಿಬಿ ಈ ಬಾರಿಯಾದರೂ ಕಪ್ ಗೆಲ್ಲಲಿ ಎಂಬುದು ಅಭಿಮಾನಿಗಳ ಹಾರೈಕೆ. ಆದರೆ ಪ್ರತೀ ಬಾರಿಯೂ ಕಳಪೆ ಪ್ರದರ್ಶನದ ಮೂಲಕ ನಿರಾಸೆ ಮೂಡಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೊಹ್ಲಿ ‘ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ. ಆದರೆ ಅದನ್ನು ಗೆಲುವಾಗಿ ಪರಿವರ್ತಿಸುತ್ತಿಲ್ಲ. ನಮಗೂ ಕಪ್ ಗೆಲ್ಲುವ ಅರ್ಹತೆಯಿದೆ. ಇತ್ತೀಚೆಗಿನ ದಿನಗಳಲ್ಲಿ ನಮ್ಮ ಮೇಲೆ ಒತ್ತಡವೂ ಹೆಚ್ಚಿದೆ. ನಾವು ಈ ಬಾರಿಯಾದರೂ ಮತ್ತೆ ಹುಮ್ಮಸ್ಸಿನಿಂದ ಆಡಬೇಕಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ