ತಂಡವು ಶ್ರೀಲಂಕಾಗೆ ತೆರಳುವ ಮುನ್ನ ನಾವು ಮಾತುಕತೆಯಾಡಿದೆವು. ತಂಡದ ಸಂಸ್ಕೃತಿಯನ್ನು ಬದಲಾಯಿಸಿ ವಿದೇಶದಲ್ಲಿ ಗೆಲ್ಲುವ ಬಯಕೆಯ ಬಗ್ಗೆ ವಿರಾಟ್ ಸ್ಪಷ್ಟ ನಿಲುವು ಹೊಂದಿದ್ದರು. ಶ್ರೀಲಂಕಾ ಪ್ರವಾಸದಲ್ಲಿ ಹಂತಕ ಪ್ರವೃತ್ತಿಯೊಂದಿಗೆ ತೆರಳಿದ ಅವರು ಅದೇ ರೀತಿ ಆತ್ಮವಿಶ್ವಾಸ ಹೊಂದುವುದನ್ನು ತಂಡದ ಆಟಗಾರರಿಂದ ಬಯಸಿದ್ದರು. ವಿದೇಶದಲ್ಲಿ ಗೆಲ್ಲುವುದು ಅವರ ಗುರಿಯಾಗಿತ್ತು ಎಂದು ಕೊಹ್ಲಿ ಕೋಚ್ ಮಾಧ್ಯಮಕ್ಕೆ ತಿಳಿಸಿದರು.