ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳ ಜತೆ ಸುದೀರ್ಘ ಸರಣಿಯನ್ನು ಮುಗಿಸಿದ ಭಾರತ ಎ ತಂಡದ ಕೋಚ್ ದ್ರಾವಿಡ್, ಸ್ಪಿನ್ ವಿರುದ್ಧ ಶಾಟ್ ಹೊಡೆಯುವ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಈ ಪೀಳಿಗೆ ವಿಸ್ಮಯಕಾರಿಯಾಗಿದೆ. ಸ್ಪಿನ್ ವಿರುದ್ಧ ಕೆಲವು ಆಟಗಾರರ ಸೃಜನಶೀಲತೆ ಅತ್ಯುತ್ಕೃಷ್ಟವಾಗಿದೆ. ಆದರೆ ಕೆಲವು ಬಾರಿ ಸಮತೋಲನ ಇಲ್ಲದಿರುವುದು ಭಾರತದ ಕ್ರಿಕೆಟ್ಗೆ ಸ್ವಲ್ಪ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.
ಯುವ ಕ್ರಿಕೆಟಿಗರು ದೀರ್ಘ ಸ್ವರೂಪದ ಕ್ರಿಕೆಟ್ ಆಡಲು ಹೆಣಗುತ್ತಾರೆಂಬ ಪರಿಕಲ್ಪನೆಯನ್ನು ತಳ್ಳಿಹಾಕಿ, ಡಿ ವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ಸ್ಟೀವನ್ ಸ್ಮಿತ್ ಮುಂತಾದ ದೀರ್ಘ ಸ್ವರೂಪದ ಕ್ರಿಕೆಟ್ ಆಟಗಾರರಿದ್ದು, ಅವರು ಟಿ 20 ಯ ಉತ್ತಮ ಆಟಗಾರರಾಗಿ ದೀರ್ಘ ಸ್ವರೂಪದ ಕ್ರಿಕೆಟ್ ಕೂಡ ಚೆನ್ನಾಗಿ ಆಡುತ್ತಾರೆ ಎಂದು ದ್ರಾವಿಡ್ ಪ್ರತಿಕ್ರಿಯಿಸಿದರು.