ಆಸ್ಟ್ರೇಲಿಯಾ- ಭಾರತ ತಂಡದ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುತ್ತ ಕುಳಿತಿದ್ದ ವೆಲ್ಲೂರು ಜಿಲ್ಲೆಯ ಪೊನ್ನೇರಿ ನಿವಾಸಿ ಸುಧಾಕರ್ ಆಸಿಸ್ 328 ರನ್ಗಳ ಬೃಹತ್ ಮೊತ್ತ ಪೇರಿಸುತ್ತಿದ್ದಂತೆ ಹತಾಶನಾಗಿದ್ದಾನೆ. ಬ್ಯಾಟಿಂಗ್ಗಿಳಿದ ಭಾರತ ತಂಡದ ಸದಸ್ಯರು ಪೆವಿಲಿಯನ್ಗೆ ಪೆರೆಡ್ ಮಾಡುತ್ತಿರುವುದನ್ನು ಕಂಡು ಮತ್ತೂ ಖಿನ್ನನಾದ ಆತ ಭಾರತ ಗೆಲ್ಲಲು ನೆರವಾಗು ಎಂದು ದೇವರ ಫೋಟೋ ಮುಂದೆ ಕುಳಿತು ಕೋರಿಕೊಂಡು ಅದಕ್ಕೆ ಪ್ರತಿಯಾಗಿ ಚಾಕುವಿನಿಂದ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ನೀಡಲು ಹೊರಟಿದ್ದಾನೆ.