ರಣಜಿ ಫೈನಲ್ : ಗೆಲುವಿನತ್ತ ದಾಪುಗಾಲು ಹಾಕುತ್ತಿರುವ ಕರ್ನಾಟಕ

ಗುರುವಾರ, 30 ಜನವರಿ 2014 (16:49 IST)
PR
PR
ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ಸ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಕರ್ನಾಟಕ ದಾಪುಗಾಲು ಹಾಕಿದ್ದು, ಗಣೇಶ್ ಸತೀಶ್ ಭರ್ಜರಿ ಶತಕ ಸಿಡಿಸಿದ್ದು, 105 ರನ್‌ಗಳನ್ನು ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. ಕೆ.ಎಲ್. ರಾಗುಲ್ 74 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದು ಕರ್ನಾಟಕ 58 ಓವರುಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೇ 193 ರನ್ ಗಳಿಸಿದ್ದು, ಪ್ರಥಮ ಇನ್ನಿಂಗ್ಸ್ ಲೀಡ್ ಗಳಿಸುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಇದಕ್ಕೆ ಮುಂಚೆ ಬ್ಯಾಟಿಂಗ್ ಆಡಿದ್ದ ಮಹಾರಾಷ್ಟ್ರ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 305 ರನ್ ಗಳಿಸಿದೆ.

ಕರ್ನಾಟಕದ ವೇಗಿಗಳಾದ ಅರವಿಂದ್, ವಿನಯ್ ಕುಮಾರ್ ಮತ್ತು ಮಿಥುನ್ ಪರಿಣಾಮಕಾರಿ ಬೌಲಿಂಗ್‌ನಿಂದ ಕೇವಲ 32 ರನ್ ಸೇರಿಸುವಷ್ಟರಲ್ಲಿ ಕಡೆಯ ಐದು ವಿಕೆಟ್‌ಗಳನ್ನು ಮಹಾರಾಷ್ಟ್ರ ಕಳೆದುಕೊಂಡಿದೆ. ಅರವಿಂದ್, ವಿನಯ್ ಕುಮಾರ್ ಮತ್ತು ಮಿಥುನ್ ತಲಾ ಮೂರು ವಿಕೆಟ್‌ಗಳನ್ನು ಗಳಿಸಿದ್ದಾರೆ. ಮಹಾರಾಷ್ಟ್ರ ಪರ ಬಾವ್ನೆ 89 ರನ್ ಸ್ಕೋರ್ ಮಾಡಿದ್ದಾರೆ. ಅತೀತ್‌ಕರ್ 50 ರನ್ ಗಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ