ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ಎಸ್‌. ಶ್ರೀಶಾಂತ್‌

ಭಾನುವಾರ, 16 ಜೂನ್ 2013 (14:54 IST)
PR
PR
ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಹಗರಣದಿಂದ ಮುಕ್ತರಾಗಲು ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ವೇಗಿ ಎಸ್‌. ಶ್ರೀಶಾಂತ್‌ ಅವರು ದೇವರ ಮೊರೆ ಹೋಗಿದ್ದಾರೆ. ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿರುವ ಅವರು ನಾನು ಏನೂ ತಪ್ಪು ಮಾಡಿಲ್ಲ ನಿಷ್ಕಳಂಕ ಎಂದು ಹೇಳಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ. ಈ ಹಿಂದೆ ನನ್ನಿಂದ ಕೆಲವು ಸಣ್ಣ ತಪ್ಪು ಆಗಿರಬಹುದು. ಆದರೆ ಈ ಹಗರಣದಲ್ಲಿ ನಾನು ಪೂರ್ಣ ಪರಿಶುದ್ಧನಾಗಿದ್ದೇನೆ. ಇದನ್ನು ಸಾಬೀತುಪಡಿಸುವ ಆತ್ಮವಿಶ್ವಾಸ ನನಗಿದೆ ಎಂದು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಪತ್ರಕರ್ತರಿಗೆ ತಿಳಿಸಿದರು.

ಅಯ್ಯಪ್ಪ ಸ್ವಾಮಿಯ ಆಶೀರ್ವಾದದಿಂದ ನಾನು ಆರೋಪದಿಂದ ಮುಕ್ತನಾಗುವೆ ಮತ್ತು ಅದು ಹೊಸ ಶ್ರೀಶಾಂತ್‌ನಾಗಿ ಎಂದವರು ಹೇಳಿದರು. ತಂದೆ ಶಾಂತಕುಮಾರನ್‌ ನಾಯರ್ ಮತ್ತು ಇನ್ನಿತರ ಕುಟುಂಬ ಸದಸ್ಯರ ಜತೆ ಶುಕ್ರವಾರ ಸಂಜೆ ಶ್ರೀಶಾಂತ್‌ ದೇವಸ್ಥಾನಕ್ಕೆ ಆಗಮಿಸಿದರು. 5 ಕಿ.ಮೀ. ನಡೆದು ಅವರು ದೇವಸ್ಥಾನಕ್ಕೆ ಆಗಮಿಸಿದ್ದರು.

ವೆಬ್ದುನಿಯಾವನ್ನು ಓದಿ