ಏಕಕಾಲಕ್ಕೆ ಸಚಿನ್, ಲಕ್ಷ್ಮಣ್, ದ್ರಾವಿಡ್ ಕಳೆದುಕೊಳ್ಳುವಂತಿಲ್ಲ: ಹ್ಯಾಡ್ಲಿ

ಶನಿವಾರ, 11 ಫೆಬ್ರವರಿ 2012 (17:29 IST)
PTI
ಭಾರತೀಯ ಹಿರಿಯ ಆಟಗಾರರು ಇನ್ನು ಸ್ವಲ್ಪ ಕಾಲ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿರುವ ನ್ಯೂಜಿಲೆಂಡ್‌ನ ಮಾಜಿ ದಿಗ್ಗಜ ಆಟಗಾರ ರಿಚರ್ಡ್ ಹ್ಯಾಡ್ಲಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಅವರನ್ನು ಏಕಕಾಲಕ್ಕೆ ಕಳೆದುಕೊಳ್ಳುವಂತಿಲ್ಲ ಎಂದಿದ್ದಾರೆ.

ಸಚಿನ್, ದ್ರಾವಿಡ್ ಹಾಗೂ ಲಕ್ಷ್ಮಣ್ ನಿವೃತ್ತಿಯ ಬಗ್ಗೆ ಮಾತನಾಡಬಾರದು. ಅವರೆಲ್ಲರು ಒಂದೇ ಸಮನೆ ತಂಡದಿಂದ ಹೊರಗುಳಿಯುವಂತಿಲ್ಲ. ಬದಲಾಗಿ ಯುವ ಕ್ರಿಕೆಟಿಗರು ಯಾವ ರೀತಿ ಪ್ರದರ್ಶನ ನೀಡುತ್ತಾರೆಂಬುದನ್ನು ನೋಡಬೇಕಾಗಿದೆ ಎಂದರು.

ಹಾಗಿದ್ದರೂ ಅಂತಿಮ ತೀರ್ಮಾನ ಕೈಗೊಳ್ಳುವುದು ಭಾರತೀಯ ಕ್ರಿಕೆಟ್ ತಂಡದ ಆಯ್ಕೆಗಾರರು. ಆದರೆ ಸಚಿನ್ ತೆಂಡೂಲ್ಕರ್ ಇನ್ನು ಕೆಲಕಾಲ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯಬಲ್ಲರು. ಆದರೆ 100ನೇ ಶತಕದ ವಿಚಾರದಲ್ಲಿ ತೀವ್ರ ಒತ್ತಡದಲ್ಲಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ