ಏಷಿಯಾ ಕಪ್ 2014: ಇಂದು ಶ್ರೀಲಂಕಾ ಜತೆ ಸೆಣಸಾಡಲಿರುವ ಭಾರತ

ಶುಕ್ರವಾರ, 28 ಫೆಬ್ರವರಿ 2014 (12:15 IST)
PTI
ಏಷಿಯಾ ಕಪ್ ನ ತನ್ನ ದ್ವಿತೀಯ ಪಂದ್ಯದಲ್ಲಿ ಭಾರತ ಇಂದು ಶ್ರೀಲಂಕಾ ಜತೆ ಕದನಕ್ಕಿಳಿಯಲಿದೆ. ಕಳೆದ ಬುಧವಾರ ಆತಿಥೇಯ ಬಾಂಗ್ಲಾದ ವಿರುದ್ಧ 6 ವಿಕೆಟ್ ಗಳ ಸುಲಭ ಜಯ ದಾಖಲಿಸಿರುವ ಭಾರತ ಇಂದು ನಿಜವಾದ ಪರೀಕ್ಷೆಯನ್ನು ಎದುರಿಸಲಿದೆ.

ಭಾರತ ತಂಡದಲ್ಲಿ ಹೆಚ್ಚಿನ ಬದಲಾವಣೆಯನ್ನು ನಿರೀಕ್ಷಿಸಲಾಗಿಲ್ಲ. ಪಂದ್ಯ ಮಧ್ಯಾಹ್ನ 1.30 ಕ್ಕೆ ಪ್ರಾರಂಭವಾಗಲಿದೆ.

ತಂಡಗಳು ಇಂತಿವೆ:

ಭಾರತ: ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯ ರಹಾನೆ
ಅಂಬಟಿ ರಾಯುಡು, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ,
ರವಿಚಂದ್ರನ್ ಅಶ್ವಿನ್, ಭುವನೇಶ್ವರ ಕುಮಾರ್, ಮೊಹಮ್ಮದ್ ಶಮಿ ,ವರುಣ್, ಚೇತೇಶ್ವರ ಪೂಜಾರ, ಸ್ಟುವರ್ಟ್ ಬಿನ್ನಿ, ಅಮಿತ್ ಮಿಶ್ರಾ ಮತ್ತು ಈಶ್ವರ್ ಪಾಂಡೆ

ಶ್ರೀಲಂಕಾ: ಏಂಜೆಲೋ ಮ್ಯಾಥ್ಯೂಸ್ (ಸಿ), ಕುಸಾಲ್ ಪೆರೇರಾ, ಲಹೀರು ಥಿರಿಮನ್ನೇ, ಕುಮಾರ ಸಂಗಕ್ಕರ (ವಿ ಕೀ), ಮಹೇಲಾ ಜಯವರ್ಧನೆ, ತೀಸಾರಾ ಪೆರೆರಾ, ಚತುರಂಗಾ ಡಿಸಿಲ್ವ, ದಿನೇಶ ಚಾಂಡಿಮಲ್, ಸಚಿತ್ರಾ ಸೇನಾನಾಯಕ, ಲಸಿತ್ ಮಾಲಿಂಗ, ಸುರಂಗಾ ಲಕ್ಮಲ್, ಅಜಂತಾ ಮೆಂಡಿಸ್, ಆಸಾನ್ ಪ್ರಿಯಂಜನ್ ಮತ್ತು ಧಮ್ಮಿಕ ಪ್ರಸಾದ್.

ವೆಬ್ದುನಿಯಾವನ್ನು ಓದಿ