ಐಪಿಎಲ್ ಆವೃತ್ತಿಗೆ ಯುವರಾಜ್ ಮೇಲೆ ಕಣ್ಣಿರಿಸಿದ ಆರ್‌ಸಿಬಿ

ಶುಕ್ರವಾರ, 17 ಜನವರಿ 2014 (12:28 IST)
PR
PR
ಬೆಂಗಳೂರು: ಆರ್‌ಸಿಬಿ ತಂಡದ ಫ್ರಾಂಚೈಸಿ ವಿಜಯ್ ಮಲ್ಯಾ ಯುವರಾಜ್ ಸಿಂಗ್ ಮೇಲೆ ಕಣ್ಣಿರಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ಯುವರಾಜ್ ನಮ್ಮ ತಂಡಕ್ಕೆ ಬರಬೇಕೆಂದು ಅಪೇಕ್ಷೆ ಪಟ್ಟಿದ್ದಾರೆ. ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪರ ಆಡಿದ ಯುವರಾಜ್‌ರನ್ನು ಆರ್‌ಸಿಬಿಗೆ ತರಬೇಕೆಂದು ಕೊಹ್ಲಿ ಬಯಸಿದ್ದಾರೆ. ಈ ಕುರಿತು ಕೊಹ್ಲಿ ಯುವರಾಜ್ ಜತೆ ಮಾತನಾಡಿದ್ದಾರೆ. ತಂಡಕ್ಕೆ ನಿಜಕ್ಕೂ ಯುವರಾಜನ ಅವಶ್ಯಕತೆ ಇದೆಯಾ? ವಿರಾಟ್ ಯುವರಾಜ್‌ರನ್ನು ಆಹ್ವಾನಿಸುತ್ತಿದ್ದಾರೆಂದರೆ ಅಲ್ಲೇನೋ ವಿಶೇಷತೆಗಳಿವೆ.

ಆ ವಿಶೇಷತೆಗಳೇನು ಎಂದರೆ ಇಲ್ಲಿವೆ ನೋಡಿ, ಯುವರಾಜ್ ಪಕ್ಕಾ ಟಿ ಟ್ವೆಂಟಿ ಪ್ಲೇಯರ್. ಟಿ ಟ್ವೆಂಟಿ ಸ್ವರೂಪದ ಆಟಕ್ಕೆ ತುಂಬಾ ಹೊಂದಿಕೆಯಾಗ್ತಾರೆ.. ಹೊಡಿ ಬಡಿ ಆಟದಲ್ಲಿ ಯುವಿಯೇ ಕಿಂಗ್ ರೀತಿಯಲ್ಲಿದ್ದಾರೆ. ಯುವಿ ಎಷ್ಟು ಬೆಸ್ಟ್ ಬ್ಯಾಟ್ಸ್‌ಮನ್ನೋ ಅಷ್ಟೇ ಸೂಪರ್ ಬೌಲರ್ ಕೂಡ ಆಗಿದ್ದಾರೆ. ಯುವಿ ಹಾಗೂ ಕೊಹ್ಲಿ ಇಬ್ಬರದ್ದೂ ಅಗ್ರೆಸಿವ್ ಆಟ. ತಮ್ಮನ್ನು ಕೆಣಕಿದವರಿಗೆ ಯುವಿ ಬ್ಯಾಟ್ ಮೂಲಕ ಉತ್ತರ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಿಯನ್ನು ಆರ್‌ಸಿಬಿ ಬಿಡ್ ಮಾಡುತ್ತದೆಂದು ನಿರೀಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ