ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ನಾಲ್ಕನೇ ಆವೃತ್ತಿಯ ಸಿಸಿಎಲ್ ಲೀಗ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ 114 ರನ್ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಹಾಲಿ ಚಾಂಪಿಯನ್ಗಳಾದ ಕರ್ನಾಟಕ ಬುಲ್ಡೋಜರ್ಸ್ ಈ ಆವತ್ತಿಯಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಖಾತೆ ತೆರೆದಿದೆ. ನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ತಂಡವು 20 ಓವರುಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಭರ್ಜರಿ 230 ರನ್ಗಳನ್ನು ದಾಖಲಿಸಿತು.
PR
PR
ಜಾಲಿ ಡೇಸ್ ಖ್ಯಾತಿಯ ಪ್ರದೀಪ್ ಅವರ 72(44 ಚೆಂಡುಗಳು) ಮತ್ತು ರಾಜೀವ್ ಅವರ 86(34 ಚೆಂಡುಗಳು) ರನ್ ಕರ್ನಾಟಕ ಬುಲ್ಡೋಜರ್ಸ್ ತಂಡವು ದೊಡ್ಡ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಯಿತು. ಈ ಪೈಕಿ ರಾಜೀವ್ ಏಳು ಬೌಂಡರಿ ಮತ್ತು ಏಳು ಸಿಕ್ಸರ್ ಸಿಡಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಅವರಲ್ಲದ ರಾಹುಲ್ ಮತ್ತು ಧ್ರುವ ತಲಾ 36 ಮತ್ತು 23 ರನ್ ದಾಖಲಿಸಿದರು.
PR
PR
ರನ್ಗಳ ಬೃಹತ್ ಮೊತ್ತ ಬೆನ್ನತ್ತಬೇಕಿದ್ದ ಬೆಂಗಾಲ್ ಟೈಗರ್ಸ್ ತಂಡವು ಆರಂಭದಲ್ಲೇ ಎಡವಿತು. ಆರಂಭದಿಂದಲೇ ಬುಲ್ಡೋಜರ್ ಆಕ್ರಮಣಕ್ಕೆ ತುತ್ತಾದ ಬೆಂಗಾಲ್ ಟೈಗರ್ಸ್ ಒಂದು ಹಂತದಲ್ಲಿ 100 ರನ್ ಪೂರೈಸುವುದೂ ಕಷ್ಟವಾಗಿತ್ತು. ಕ್ರಮೇಣ ಚೇತರಿಸಿಕೊಂಡು 117 ರನ್ ಹೊಡೆದರೂ 114 ರನ್ಗಳಿಂದ ಸೋಲನುಭವಿಸಿತು. ಕರ್ನಾಟಕ ಬುಲ್ಡೋಜರ್ ಪರ ಭಾಸ್ಕರ್ ಮೂರು, ತರುಣ್ ಎರಡು ವಿಕೆಟ್ ಗಳಿಸಿದರು.