ಜಾಹೀರ್, ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ : ರಾಹುಲ್ ದ್ರಾವಿಡ್

ಗುರುವಾರ, 20 ಫೆಬ್ರವರಿ 2014 (17:28 IST)
PTI
"ಜಾಹೀರ್ ಖಾನ್ ರಿಗೆ ತಮ್ಮ ಭವಿಷ್ಯದ ಬಗ್ಗೆ ಯೋಚಿಸುವ ಅಗತ್ಯವಿದೆ. ಇಲ್ಲದಿದ್ದರೆ ಅವರಿಗೆ ಈ ವರ್ಷದ ಅಂತ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟನಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಬಹುದು" ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿ ಸ್ಥಾನಗಳಿಸಿದ್ದ ಜಾಹೀರ್ ಪ್ರಭಾವಿ ಬೌಲಿಂಗ್ ಮಾಡಲು ವಿಫಲವಾಗಿದ್ದರು.

" ತಮ್ಮ ವೃತ್ತಿಜೀವನ ಅಂತ್ಯದಲ್ಲಿ ಸಂಘರ್ಷ ಮಾಡಬೇಕು ಎಂದು ಬಯಸುವ ಆಟಗಾರ ಆಗಿರಲಾರರು ಜಾಹೀರ್. ಆದರೆ ಕಳೆದ ಎರಡು ಸರಣಿಗಳಲ್ಲಿ ಅವರು ಸಂಘರ್ಷ ಮಾಡುವುದು ಕಂಡುಬಂತು. ಹೀಗಾಗಿ ಅವರು ಈ ವಿಷಯದಲ್ಲಿ ಆಲೋಚಿಸಬೇಕಾದ ಅವಶ್ಯಕತೆ ಇದೆ" ಎಂದು ದ್ರಾವಿಡ್ ಹೇಳಿದ್ದಾರೆ. 92 ಟೆಸ್ಟ್ ಗಳಿಂದ 311 ವಿಕೆಟ್ ಗಳಿಸಿರುವ ಅವರು ಕಪಿಲ್ ದೇವ್ ನಂತರ ಭಾರತ ಕಂಡ ಯಶಸ್ವಿ ವೇಗದ ಬೌಲರ್ ಎನಿಸಿದ್ದಾರೆ.

" ಜಾಹೀರ್ ತಮ್ಮ ವೃತ್ತಿಜೀವನಕ್ಕೆ ಅವಿಸ್ಮರಣೀಯ ಅಂತ್ಯ ನೀಡಬೇಕು ಎಂದು ಬಯಸುತ್ತೇನೆ" ಎಂದು ದ್ರಾವಿಡ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ