ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ನಿಷೇಧಕ್ಕೊಳಗಾದ ಭಾರತದ ವೇಗಿ ಎಸ್. ಶ್ರೀಶಾಂತ್ ಜೈಪುರದ ರಾಜಕುಟುಂಬಕ್ಕೆ ಸೇರಿದ ಕನ್ಯೆಯೊಂದಿಗೆ ಡಿ.12ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಗುರುವಾಯೂರು ಶ್ರೀಕೃಷ್ಣ ಮಂದಿರದಲ್ಲಿ ಈ ವಿವಾಹ ನಡೆಯಲಿದೆ.ಅದೇ ದಿನ ಸಂಜೆ ಕೊಚ್ಚಿಯಲ್ಲಿ ಆರತಕ್ಷತೆ ಕಾರ್ಯಕ್ರಮವಿದೆ ಎಂದು ಶ್ರೀಶಾಂತ್ ನಿಕಟವರ್ತಿ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅವರಿಬ್ಬರು ಪ್ರೀತಿಸುತ್ತಿದ್ದು, ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಿಕ್ಕಿ ಶ್ರೀಶಾಂತ್ ಜೈಲು ಸೇರಿದ ಸಂಕಷ್ಟದ ಸಂದರ್ಭದಲ್ಲೂ ಶ್ರೀಶಾಂತ್ಗೆ ಅವಳು ಬೆಂಬಲವಾಗಿ ನಿಂತಿದ್ದಳು.