ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ:ಧೋನಿ

ಭಾನುವಾರ, 30 ಮಾರ್ಚ್ 2014 (11:15 IST)
PTI
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ತಂಡವನ್ನು ಸತತವಾಗಿ ಯಶಸ್ಸಿನತ್ತ ಸಾಗಿಸುತ್ತಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಪಂದ್ಯಾವಳಿಯಲ್ಲಿ ಟಿ20 ಹೊರತುಪಡಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ನಮ್ಮ ಡ್ರೆಸ್ಸಿಂಗ್ ರೂಮ್ ಉತ್ತಮ ವಾತಾವರಣದಿಂದ ಕೂಡಿದೆ. ಪಂದ್ಯಾವಳಿಯಲ್ಲಿ ದೊರಕಿದ ಯಶಸ್ಸನ್ನು ಆಟಗಾರರು ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮಗೆ ಸಂಬಂಧಪಟ್ಟ ಹಲವಾರು ಘಟನೆಗಳು ನಡೆಯಬಹುದು. ಆದರೆ, ನಾವು ನಮ್ಮ ಕರ್ತವ್ಯದ ಕುರಿತು ಗಮನಹರಿಸುವ ಅಗತ್ಯವಿದೆ' ಎಂದು ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಚೆನ್ನೈ ತಂಡದ ನಾಯಕತ್ವ ತ್ಯಜಿಸುತ್ತಿರುವುದು ನಿಜವೇ ಅಥವಾ ಇಲ್ಲವೆ ಎಂಬ ಪ್ರಶ್ನೆಯನ್ನು ಧೋನಿ ತಳ್ಳಿ ಹಾಕಿದರು. 'ಆ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ. ಈಗ ವಿಶ್ವಟಿ20 ಪಂದ್ಯಾವಳಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿತ್ತೇನೆ. ಭಾರತಕ್ಕೆ ಕೇವಲ 40 ನಿಮಿಷಗಳ ವಿಮಾನ ಇದೆ. ಅನಂತರ ನೀವು ಅಲ್ಲಿ ನನಗೆ ಈ ಪ್ರಶ್ನೆ ಕೇಳಬಹುದು' ಎಂದು ಧೋನಿ ಉತ್ತರಿಸಿದರು.

ವೆಬ್ದುನಿಯಾವನ್ನು ಓದಿ