ಪ್ರತಿಕೂಲ ಸ್ವಾಗತಕ್ಕೆ ಹೆದರಿಲ್ಲ : ಧೋನಿ

ಗುರುವಾರ, 31 ಜನವರಿ 2008 (16:14 IST)
ಜನಾಂಗೀಯ ನಿಂದನೆಯ ವಿವಾದದ ನಂತರ ತ್ವೇಷಮಯ ವಾತಾವರಣದ ಬಿಸಿ ಹರ್ಭಜನ್ ಸಿಂಗ್ ಅವರಿಗೆ ಆಗಲಿ ಇತರ ಕ್ರಿಕೆಟಿಗರಿಗೆ ಆಗಲಿ ತಟ್ಟುವುದಿಲ್ಲ. ಆಸ್ಟ್ರೇಲಿಯ ತಂಡದ ಕ್ರಿಕೆಟಿಗರು ಆಗಲಿ, ಅಭಿಮಾನಿಗಳು ಯಾವ ರೀತಿ ನಮಗೆ ಸ್ವಾಗತ ನೀಡುತ್ತಾರೆ ಎನ್ನುವುದರ ಕುರಿತು ತಲೆ ಕೆಡಿಸಿಕೊಂಡಿಲ್ಲ ಎಂದು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೇಳಿದ್ದಾರೆ.

ಸ್ವಾಗತ ಅಥವ ಆತಿಥ್ಯ ಯಾವ ರೀತಿ ದೊರೆಯುಲಿದೆ ಎನ್ನುವುದರ ಬಗ್ಗೆ ವಿಚಾರ ಮಾಡಿಲ್ಲ. ಮೈದಾನದಲ್ಲಿನ ಹಣಾಹಣಿಯ ವಿಚಾರವಲ್ಲದ್ದರಿಂದ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಟ್ವೆಂಟಿ ಪಂದ್ಯ ಮುನ್ನ ಧೋನಿ ಹೇಳಿದ್ದಾರೆ.

ಆಸಿಸ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಉಂಟಾದ ವಿವಾದಗಳಲ್ಲಿ ಅಂತ್ಯಗೊಂಡ ನಂತರ ಮಾತನಾಡಿದ ಅವರು ಟ್ವೆಂಟಿ 20 ಪಂದ್ಯದಲ್ಲಿ ಆಗಲಿ ಅಥವಾ ಏಕದಿನ ಸರಣಿಯಲ್ಲಿ ಈ ರೀತಿಯ ಘಟನೆಗಳು ಸಂಭವಿಸುವುದಿಲ್ಲ. ತಂಡದ ಸಹ ಕ್ರಿಕೆಟಿಗರು ಐಸಿಸಿ ರೂಪಿಸಿರುವ ನೀತಿ ಸಂಹಿತೆಯನ್ನು ಪಂದ್ಯ ನಡೆಯುತ್ತಿರುವ ಸಮಯದಲ್ಲಿ ಪಾಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ