ಯುವಿ ಫಾರ್ಮ್ ಕಂಡುಕೊಳ್ಳಬೇಕಾಗಿರುವುದು ಅಗತ್ಯ: ಮುರಳಿ

ಮಂಗಳವಾರ, 31 ಆಗಸ್ಟ್ 2010 (10:54 IST)
ಮುಂಬರುವ ಏಕದಿನ ವಿಶ್ವಕಪ್‌ ದೃಷ್ಟಿಕೋನದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಆದಷ್ಟು ಬೇಗನೇ ಫಾರ್ಮ್‌ಗೆ ಮರಳಬೇಕಾಗಿರುವುದು ಭಾರತಕ್ಕೆ ಅತೀ ಮಹತ್ವದೆನಿಸಲಿದೆ ಎಂದು ಆಫ್ ಸ್ಪಿನ್ನರ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಯುವಿ ಶ್ರೇಷ್ಠ ಬ್ಯಾಟ್ಸ್‌ಮನ್. ಎಲ್ಲಾ ಆಟಗಾರರು ಕಠಿಣ ಹಾದಿಯಲ್ಲಿ ಹೋಗುತ್ತಾರೆ. ನನ್ನ ಪ್ರಕಾರ ಮಾಧ್ಯಮಗಳು ಅವರ ಬಗ್ಗೆ ಟೀಕೆ ನಡೆಸುವಾಗ ಜಾಗರೂಕರಾಗಿರಬೇಕು. ಇದು ಅವರ ಮೇಲೆ ಭಾರೀ ಒತ್ತಡವನ್ನುಂಟು ಮಾಡಿತ್ತಿದೆ. ಇದು ಅವರ ಬ್ಯಾಟಿಂಗ್‌ಗೂ ಧಕ್ಕೆಯನ್ನುಂಟುಮಾಡುತ್ತಿದೆ ಎಂದವರು ಹೇಳಿದರು.

ಆದರೂ 2011 ಏಕದಿನ ವಿಶ್ವಕಪ್‌ನಲ್ಲಿ ಯುವಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದವರು ಹೇಳಿದರು. ಇತ್ತೀಚೆಗಷ್ಟೇ ಅಂತ್ಯಗೊಂಡಿದ್ದ ತ್ರಿಕೋನ ಏಕದಿನ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿದ್ದ ಯುವಿ ಕೇವಲ 18.75ರ ಸರಾಸರಿಯಲ್ಲಿ 75 ರನ್ನುಗಳನ್ನಷ್ಟೇ ಗಳಿಸಿದ್ದರು. ಅವರ ಗರಿಷ್ಠ ಮೊತ್ತ 38 ಆಗಿತ್ತು.

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ...
ಅದೇ ವೇಳೆ ಪಾಕಿಸ್ತಾನ ಆಟಗಾರರ ಮೋಸದಾಟದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲು ನಿರಾಕರಿಸಿದ ಮುರಳಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದವರು ಹೇಳಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ