ಶ್ರೀಲಂಕಾ ಕ್ರಿಕೆಟ್ ಅತಿ ದೊಡ್ಡ ಹಿನ್ನಡೆಗೊಳಗಾಗಿದ್ದು, ಇತ್ತೀಚೆಗಷ್ಟೇ ಏಷ್ಯಾ ಉಪಖಂಡದಲ್ಲಿ ನಡೆದಿದ್ದ ಪ್ರತಿಷ್ಠಿತ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಲಂಕನ್ ಕ್ರಿಕೆಟಿಗನೊಬ್ಬ ಉದ್ದೀಪನ ದ್ರವ್ಯ ಸೇವಿಸಿರುವ ಘಟನೆ ಬೆಳಕಿಗೆ ಬಂದಿವೆ.
ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಶ್ರೀಲಂಕಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಉಪುಲ್ ತರಂಗ ಇದೀಗ ನಿಷೇಧಿ ತ ಉದ್ದೀಪನ ಮದ್ದು ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸದ್ಯದಲ್ಲೇ ಆಟಗಾರನ ವಿರುದ್ದ ತನಿಖೆ ಕೈಗೊಳ್ಳುವ ಸಾಧ್ಯತೆಗಳಿವೆ.
ಒಂದು ವೇಳೆ ಆಟಗಾರನ ಮೇಲಿನ ಆರೋಪವು ಸಾಬೀತಾದಲ್ಲಿ ಕಠಿಣ ಶಿಕ್ಷೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ತರಂಗ ಅಜೇಯ ಶತಕ ಬಾರಿಸಿದ್ದರು. ಅಲ್ಲದೆ ತಂಡ ಈ ಪ್ರತಿಷ್ಠಿತ ಟೂರ್ನಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತ್ತು.