ಸಾಂಗ್ವಾನ್ ಮೇಲೆ ಪ್ರಭಾಕರ್ ಅಸಮಾಧಾನ

ಶನಿವಾರ, 20 ಜುಲೈ 2013 (12:40 IST)
PR
PR
ದೆಹಲಿಯ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆದಂಥ ಪ್ರಭಾಕರ್ ಅವರು ಐಪಿಎಲ್ನಲ್ಲಿ ಉದ್ದೀಪನ ಮದ್ದು ಸೇವಿಸಿರುವ ಆರೋಪಕ್ಕೆ ಒಳಗಾಗಿರುವ ಕೋಲ್ಕತ್ತಾ ನೈಟ್ರೈಡರ್ಸ್ ತಂಡದ ಬೌಲರ್ ಪ್ರದೀಪ್ ಸಾಂಗ್ವಾನ್ ಅವರ ಅಸಮಧಾನ ವ್ಯಕ್ತಪಡಿಸಿದ್ದಾರೆ .

ಪ್ರದೀಪ್ ಸಾಂಗ್ವಾನ್ ಯಾರ ಮಾತನ್ನೂ ಕೇಳದ ವ್ಯಕ್ತಿಯಾಗಿದ್ದರಿಂದ ಈ ಸಮಸ್ಯೆಗೆ ಸಿಲುಕಿದ್ದಾನೆ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಪ್ರದೀಪ್ ಸಾಂಗ್ವಾನ್ ಕೂಡ ದೆಹಲಿ ರಣಜಿ ತಂಡದ ಸದಸ್ಯರೇ ಆಗಿದ್ದರಿಂದ, ಇವರಿಬ್ಬರಿಗೂ ಗುರು-ಶಿಷ್ಯನ ನಂಟು.

ತರಬೇತಿ ಸಮಯದಲ್ಲಿ ಪ್ರದೀಪ್ ಗೆ ಎಷ್ಟು ಸಲ ಏನಾದ್ರು ಹೇಳಿದ್ರೆ ಕೇಳದೆ ತನ್ನದೇ ಮಾಡುತ್ತಿದ್ದ ಮೊಂಡುವಾದಿ ,ಆತ ಯಾರ ಮಾತನ್ನು ಕೇಳದ ವ್ಯಕ್ತಿ ಆತನ ಈ ಸ್ಥಿತಿಗೆ ಕಾರಣ ಆವನೇ ಬೇರಾರು ಅಲ್ಲ ಎಂದರು .

ವೆಬ್ದುನಿಯಾವನ್ನು ಓದಿ