ಸ್ಪಾಟ್‌ಫಿಕ್ಸಿಂಗ್ ರೂವಾರಿ ಶ್ರೀಶಾಂತ್‌ಗೆ ವಿವಾಹ ಬಂಧನ?

ಶನಿವಾರ, 15 ಜೂನ್ 2013 (12:33 IST)
PTI
ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಈಗಷ್ಟೇ ಜಾಮೀನು ಪಡೆದು ಹೊರಬಂದಿರುವ ಕೇರಳ ವೇಗಿ ಶ್ರೀಶಾಂತ್‌ ಸದ್ಯದಲ್ಲೇ ವಿವಾಹ ಬಂಧನಕ್ಕೊಳಗಾಗುವ ಸಾಧ್ಯತೆಯಿದೆಯೇ? ಹೌದು ಎನ್ನುತ್ತವೆ ಮೂಲಗಳು. ಶ್ರೀಶಾಂತ್‌ ಈ ವಾರಾಂತ್ಯದಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಅಲ್ಲಿ ವಿವಾಹದ ಕುರಿತೇ ಪ್ರಾರ್ಥಿಸಲಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಶ್ರೀಶಾಂತ್‌ ಅವರ ವಿವಾಹ ನಡೆಯುವ ಸಾಧ್ಯತೆಯಿದೆ. ಆದರೆ ಈ ಕುರಿತು ಶ್ರೀ ಕುಟುಂಬ ಈವರೆಗೆ ಯಾವುದೇ ವಿವರಗಳನ್ನು ಬಾಯಿಬಿಟ್ಟಿಲ್ಲ. ಕೇರಳದ ಹೊರಗಿನ ಹುಡುಗಿ ಎಂದು ಮಾತ್ರ ತಿಳಿಸಿದ್ದಾರೆ. ರಾಜಸ್ಥಾನದ ಜೈಪುರ ಮೂಲದ ಭಾರೀ ಮನೆತನದಿಂದ ಪ್ರಸ್ತಾಪವೊಂದು ಬಂದಿದೆ, ನಾವಿನ್ನೂ ಹುಡುಗಿಯನ್ನು ನೋಡಿಲ್ಲ ಎಂದು ಶ್ರೀ ತಂಗಿ ವಿಧಿತಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ