ಹರ್ಭಜನ್ ನನಗೆ ಕಪಾಳ ಮೋಕ್ಷ ಮಾಡಿರಲಿಲ್ಲ: ಶ್ರೀಶಾಂತ್

ಶುಕ್ರವಾರ, 12 ಏಪ್ರಿಲ್ 2013 (13:34 IST)
PR
PR
ಹರ್ಭಜನ್ ಸಿಂಗ್ ಬೆನ್ನಿಗೆ ಚೂರಿ ಹಾಕುವ ಮನುಷ್ಯ ಎಂದು ಕೆಲವರು ನನಗೆ ಹಲವಾರು ಬಾರಿ ಹೇಳಿದ್ದರು. ಆದರೂ ನಾನು ಆ ಮಾತನ್ನು ನಂಬಿರಲಿಲ್ಲವೆಂದು ಭಾರತ ಕ್ರಿಕೆಟ್ ತಂಡದ ಆಟಗಾರ ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.

2008 ರಲ್ಲಿ ಹರ್ಭರ್ಜನ್ ಸಿಂಗ್ ನನಗೆ ಕಪಾಳ ಮೋಕ್ಷ ಮಾಡಿರಲಿಲ್ಲ ಬದಲಾಗಿ ಮೊಣಕೈಯಿಂದ ಗುದ್ದಿದ್ದರು ಎಂದು ಶ್ರೀಶಾಂತ್ ಸ್ಪಷ್ಟಪಡಿಸಿದ್ದಾರೆ.

ಹರ್ಭಜನ್ ಸಿಂಗ್ ಒಳ್ಳೆಯ ಮನುಷ್ಯನಲ್ಲ ಎಂದೂ ಹಲವರು ನನಗೆ ಹೇಳಿದ್ದರು ಎಂಬುದಾಗಿಯೂ ಶ್ರೀಶಾಂತ್ ತಿಳಿಸಿದ್ದಾರೆ.

ಶ್ರೀಶಾಂತ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ 2011 ರಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿಲ್ಲ. ಶ್ರೀಶಾಂತ್ ಭಾರತ ಕ್ರಿಕೆಟ್ ತಂಡಕ್ಕೆ ಮರಳಲು ಯತ್ನಿಸುತ್ತಿದ್ದು, ಭಜ್ಜಿಯೊಂದಿಗಿನ ವಿರಸದ ಪ್ರಕರಣವನ್ನು ಮತ್ತೆ ಕೆದಕಿರುವುದಕ್ಕೆ ಕ್ರೀಡಾ ವಲಯದಲ್ಲಿ ಅಚ್ಚರಿ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ