ಬ್ರಿಸ್ಪೇನ್ನಲ್ಲಿ ಭಾರತದ ಸೋಲು ಐದನೇ ನೇರ ಸೋಲಾಗಿದೆ. ಕಳೆದ 18 ಪಂದ್ಯಗಳ ಪೈಕಿ 15ನೇ ಸೋಲಾಗಿದ್ದು, ಒಂದು ಗೆಲುವನ್ನು ಮಾತ್ರ ಸಾಧಿಸಿದೆ. ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತ 2-0ಯಿಂದ ಹಿನ್ನಡೆ ಅನುಭವಿಸಿದೆ. ನಾವು ಅನೇಕ ಕ್ಷೇತ್ರಗಳಲ್ಲಿ ಸುಧಾರಣೆ ತೋರಿಸಿದ್ದೇವೆ. ಆದರೆ ಗೆರೆಯನ್ನು ಇನ್ನೂ ದಾಟುತ್ತಿಲ್ಲ ಎಂದು ಧೋನಿ ಪ್ರತಿಕ್ರಿಯಿಸಿದರು. ಅದಕ್ಕೆ ಇನ್ನಷ್ಟು ಸಮಯಾವಕಾಶ ಬೇಕು.
ಒಂದೊಮ್ಮೆ ಗೆರೆಯನ್ನು ದಾಟಲಾರಂಭಿಸಿದರೆ, ಅಂತಹ ಆಕ್ರಮಣಕಾರಿ ಮನೋಭಾವವನ್ನು ಸೂಕ್ತ ಮಾರ್ಗದಲ್ಲಿ ಅಳವಡಿಸಿಕೊಂಡರೆ, ನಮ್ಮ ಕಡೆಯಿಂದ ವಿಪುಲ ಉತ್ತಮ ಫಲಿತಾಂಶಗಳು ಸಿಗುತ್ತವೆ ಎಂದು ಹೇಳಿದರು.