ಬಿಜೆಪಿಯ "ದಾದಾ' ಆಗಲು ನಿರಾಕರಿಸಿದ ಸೌರವ್ ಗಂಗೂಲಿ

ಶುಕ್ರವಾರ, 23 ಜನವರಿ 2015 (15:12 IST)
ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಅವರು ಬಿಜೆಪಿ ಸೇರಲಿದ್ದಾರೆ. ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧದ ಬಿಜೆಪಿ ಮುಖ "ದಾದಾ' ಆಗಲಿದ್ದಾರೆ ಎಂದು ಹಬ್ಬಿದ್ದ ವದಂತಿಗಳಿಗೆ ತೆರೆ ಬಿದ್ದಿದೆ.
 
"ಸೌರವ್‌ ಗಂಗೂಲಿ ಬಿಜೆಪಿಯನ್ನು ಸೇರುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಪಕ್ಷಕ್ಕೆ ಭಾರೀ ಬಲ ಬರಲಿದೆ. ದಾದಾ ವರ್ಸಸ್‌ ದೀದಿ ಸ್ಪರ್ಧೆ ಏರ್ಪಡಲಿದೆ ಎಂದು ಉದ್ಯಮಿ ಹರೀಶ್‌ ಗೋಯಂಕಾ ಅವರು ಬುಧವಾರ ಸಂಜೆ ಟ್ವೀಟ್‌ ಮಾಡಿದ್ದರು. 
 
ಇದರ ಬೆನ್ನಲ್ಲೇ ತಾವು ಬಿಜೆಪಿ ಸೇರುತ್ತಿರುವುದಾಗಿ ಹಬ್ಬಿರುವ ವದಂತಿಯನ್ನು ಸ್ವತಃ ಸೌರವ್‌ ಗಂಗೂಲಿ ನಿರಾಕರಿಸಿದ್ದಾರೆ. "ಬಿಜೆಪಿಯಿಂದ ಆಫ‌ರ್‌ ಬಂದಿದ್ದು ನಿಜ. ಆದರೆ, ಅದನ್ನು ನಾನು ನಿರಾಕರಿಸಿದ್ದೇನೆ.
 
ಪಕ್ಷ ಸೇರಲ್ಲ. ಚುನಾವಣೆಗೆ ಕೂಡ ಸ್ಪರ್ಧಿಸುವುದಿಲ್ಲ' ಎಂದು ಸುದ್ದಿಗಾರರೆದುರು ಹೇಳಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಗೌರವ ಭಾವನೆ ಹೊಂದಿದ್ದಾಗಿ ಹೇಳಿದ್ದಾರೆ. ಇನ್ನು "ಉದ್ಯಮಿಯ ಟ್ವೀಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ' ಎಂದು ಬಿಜೆಪಿ ಪ.ಬಂಗಾಳ ಪ್ರಭಾರಿ ಸಿದ್ಧಾರ್ಥ ನಾಥ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ