ಇಂಗ್ಲೆಂಡ್ ಆಟಗಾರ ಆಂಡರ್ಸನ್ ಅವರಿಗೆ ಕ್ಲೀನ್ ಚಿಟ್ ನೀಡಿದ ತೀರ್ಪನ್ನು ಪರಿಶೀಲಿಸುವಂತೆ ಬಿಸಿಸಿಐ ನೀಡಿದ್ದ ಮನವಿಯನ್ನು ಐಸಿಸಿ ತಿರಸ್ಕರಿಸಿದ್ದರಿಂದ ಬಿಸಿಸಿಐಗೆ ಮುಖಭಂಗವಾಗಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಆಂಡರ್ಸನ್ ಮತ್ತು ರವೀಂದ್ರ ಜಡೇಜಾ ನಡುವೆ ವಾಗ್ವಾದ ನಡೆದ ಸಂದರ್ಭದಲ್ಲಿ ಆಂಡರ್ಸನ್ ತಮ್ಮನ್ನು ಅವಾಚ್ಯವಾಗಿ ಬೈಯ್ದು ದೂಡಿದ್ದಾರೆಂದು ಜಡೇಜಾ ಆಪಾದಿಸಿದ್ದರು.