ಭಾರತ ಸಂಕಷ್ಟದ ಸ್ಥಿತಿಯಲ್ಲಿ: 62ರನ್‌ಗೆ ನಾಲ್ಕು ವಿಕೆಟ್ ಪತನ

ಗುರುವಾರ, 7 ಆಗಸ್ಟ್ 2014 (17:58 IST)
ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್‌ನಲ್ಲಿ ಗುರುವಾರ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕೇವಲ 6 ಓವರುಗಳಲ್ಲಿ 8 ರನ್ ಗಳಿಸುವಷ್ಟರಲ್ಲೇ 4 ವಿಕೆಟ್ ಪತನಗೊಂಡಿದೆ. ಧೋನಿ ಟಾಸ್ ಗೆದ್ದು, ಪ್ರತಿಕೂಲ ಹವಾಮಾನದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತತಂಡಕ್ಕೆ ಮುಳುವಾಯಿತು.
 
 ಜೇಮ್ಸ್ ಆಂಡರ್‌ಸನ್  ಮತ್ತು ಸ್ಟುವರ್ಟ್ ಬ್ರಾಡ್ ಅವರ ಸ್ವಿಂಗ್ ಮತ್ತು ಬೌನ್ಸ್‌ ಎಸೆತಗಳಿಗೆ ತಿಣುಕಾಡಿದ ಭಾರತದ ಆಟಗಾರರು ಒಂದರ ಹಿಂದೊಂದು ವಿಕೆಟ್ ಕಳೆದುಕೊಂಡು ಪೆವಿಲಿಯನ್ ಹಾದಿಯನ್ನು ಹಿಡಿದರು.  13 ಎಸೆತಗಳಲ್ಲಿ ಯಾವುದೇ ರನ್ ಗಎಳಿಸದೇ ಪ್ರವಾಸಿ ತಂಡ ನಾಲ್ಕು ವಿಕೆಟ್ ಕಳೆದುಕೊಂಡಿತು. ಪೂಜಾರ್, ಕೊಹ್ಲಿ ಮತ್ತು ಮುರಳಿ ವಿಜಯ್ ಶೂನ್ಯಕ್ಕೆ ಔಟಾಗಿದ್ದು, ಆಂಡರ್‌ಸನ್ ಮತ್ತು ಬ್ರಾಡ್ ಅಬ್ಬರದ ಬೌಲಿಂಗ್ ದಾಳಿಗೆ ಸಾಕ್ಷಿಯಾಗಿತ್ತು.

 ಗೌತಂ ಗಂಭೀರ್ ಅವರನ್ನು ಶಿಖರ್ ಧವನ್ ಬದಲಿಗೆ ತೆಗೆದುಕೊಂಡಿದ್ದರೂ, ಗಂಭೀರ್ ಮೊ ದಲ ವಿಕೆಟ್ ಒಪ್ಪಿಸಿದರು.ಎಡಗೈ ಆಟಗಾರ ಬ್ರಾಡ್ ಎಸೆತಕ್ಕೆ ಜೋ ರೂಟ್‌ಗೆ ಕ್ಯಾಚಿತ್ತು ಔಟಾದರು. ಆಂಡರ್‌ಸನ್ ತಮ್ಮ ಲಂಕಾಶೈರ್ ತವರು ಮೈದಾನದಲ್ಲಿ ಮೂರು ಎಸೆತಗಳಲ್ಲಿ ಒಂದು ರನ್ ಕೂಡ ನೀಡದೇ ಓಪನರ್ ಮುರಳಿ ವಿಜಯ್ ಮತ್ತು ವಿರಾಟ್ ಕೊಹ್ಲಿ ವಿಕೆಟ್‌ಗಳನ್ನು ಶೂನ್ಯಕ್ಕೆ ಕಬಳಿಸಿದರು. ಭಾರತ 62 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆಡುತ್ತಿದೆ. ರೆಹಾನೆ ಅಜೇಯ 24 ಮತ್ತು ಧೋನಿ ಅಜೇಯ 24 ರನ್ ಬಾರಿಸಿ ಆಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ