ಶ್ರೀಲಂಕಾ ಸರಣಿಗೆ ವಿರಾಟ್ ಕೊಹ್ಲಿ ನಾಯಕ, ಧೋನಿಗೆ ವಿರಾಮ

ಮಂಗಳವಾರ, 21 ಅಕ್ಟೋಬರ್ 2014 (16:29 IST)
ಶ್ರೀಲಂಕಾ ವಿರುದ್ಧ ಸರಣಿಗೆ ಟೀಂಇಂಡಿಯಾವನ್ನು ಪ್ರಕಟಿಸಲಾಗಿದ್ದು, ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿರಾಮ ಸಿಕ್ಕಿದೆ. ಅವರ ಬದಲಿಗೆ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿದ್ದಾರೆ. ಮೊದಲ ಮೂರು ಪಂದ್ಯಗಳಿಗೆ ಮಾತ್ರ ಈ ಬದಲಾವಣೆ ಮಾಡಲಾಗಿದೆ. ಆರ್. ಅಶ್ವಿನ್ ಮತ್ತೊಮ್ಮೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 
 
 ಧೋನಿ ಅವರಿಗೆ ವಿರಾಮ ನೀಡಿ ಅವರ ಬದಲಿಗೆ ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ನಿರ್ವಹಿಸಲಿದ್ದಾರೆ. ತಂಡದಲ್ಲಿ ಇನ್ನೊಂದು ಪ್ರಮುಖ ಬದಲಾವಣೆ ವರುಣ್ ಆರಾನ್ ಅವರ ಸೇರ್ಪಡೆ. ಭುವನೇಶ್ವರ್ಅವರಿಗೆ ವಿರಾಮ ನೀಡಲಾಗಿದ್ದು,  ಆರಾನ್ ಅವರು ವೇಗದ ಬೌಲಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.ರೋಹಿತ್ ಶರ್ಮಾ ಅವರಿಗೆ ಬೆರಳು ಗಾಯವಾಗಿದ್ದರಿಂದ ಅವರನ್ನು ಇನ್ನೂ ಪರಿಗಣಿಸಲಾಗಿಲ್ಲ.

ಕಟಕ್, ಹೈದರಾಬಾದ್, ರಾಂಚಿ, ಕೊಲ್ಕತ್ತಾ ಮತ್ತು ಅಹ್ಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಮೂರು ದಿನಗಳ ಪಂದ್ಯಗಳಿಗೆ ಆಟಗಾರರ ಹೆಸರು: ವಿರಾಟ್ ಕೊಹ್ಲಿ, ಶಿಖರ್ ಧವನ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಅಂಬಾಟಿ ರಾಯುಡು, ವೃದ್ಧಿಮಾನ್ ಸಹಾ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಮುರಳಿ ವಿಜಯ್, ವರುಣ್ ಆರಾನ್ ಮತ್ತು ಅಕ್ಷರ್ ಪಟೇಲ್.

ವೆಬ್ದುನಿಯಾವನ್ನು ಓದಿ