ಕ್ರಿಕೆಟ್ ತಂಡದ ಪ್ರದರ್ಶನ ನಾಯಕ ಮತ್ತು ಆಟಗಾರರನ್ನು ಅವಲಂಬಿಸಿರುತ್ತದೆ: ಸಯ್ಯದ್ ಕಿರ್ಮಾನಿ

ಬುಧವಾರ, 20 ಆಗಸ್ಟ್ 2014 (17:58 IST)
ಕ್ರಿಕೆಟ್ ದಿಗ್ಗಜ ರವಿ ಶಾಸ್ತ್ರೀ ಅವರನ್ನು ಭಾರತ ಕ್ರಿಕೆಟ್ ತಂಡದ ನಿರ್ದೇಶಕರನ್ನಾಗಿ ನೇಮಿಸಿರುವುದನ್ನು ಸ್ವಾಗತಿಸಿರುವ ಮಾಜಿ ಆಟಗಾರ ಕಿರ್ಮಾನಿ ಯಾವುದೇ ಕ್ರಮಗಳನ್ನು ಕೈಗೊಂಡರೂ ತಂಡದ ಸಾಧನೆಯ ಅಂತಿಮ ಜವಾಬ್ದಾರಿ ನಾಯಕ ಮತ್ತು ಉಳಿದ ಆಟಗಾರರ ಮೇಲಿರುತ್ತದೆ ಎಂದು ಹೇಳಿದ್ದಾರೆ. 

ಕ್ರಿಕೆಟ್ ಕಾರ್ಯಾಚರಣೆಗಳ ಉಸ್ತುವಾರಿ/ ಮುಖ್ಯ ಕೋಚ್ ಅಥವಾ ಬೌಲಿಂಗ್  ಕೋಚ್ - ಹೀಗೆ ಯಾವುದೇ ಇರಲಿ ಎ,ಬಿ, ಸಿ, ಡಿ ಯಿಂದ( ತಳಮಟ್ಟದಿಂದ) ಬದಲಾವಣೆಯನ್ನು ಪ್ರಾರಂಭಿಸುತ್ತಿರುವುದು ಸ್ವಾಗತಾರ್ಹ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 
 
ಆದರೆ  ಸಂಪೂರ್ಣ ಫಲಿತಾಂಶ ನಾಯಕ ಮತ್ತು ಆಟಗಾರರ ಪ್ರದರ್ಶನದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. 
 
1983 ರಲ್ಲಿ ಕೋಚ್ ಮತ್ತು ನಿರ್ದೇಶಕರಿಲ್ಲದೇ ಭಾರತ ವಿಶ್ವಕಪ್‌ನ್ನು ಎತ್ತಿ ಹಿಡಿದಿದ್ದನ್ನು ಸಹ ಅವರು ಪ್ರಸ್ತಾಪಿಸಿದರು. 

ವೆಬ್ದುನಿಯಾವನ್ನು ಓದಿ