"ಪೂಜಾರ ಏಕದಿನ ಪಂದ್ಯ ಅಥವಾ ಟಿ20 ತಂಡದ ಭಾಗವಾಗಿ ಉಳಿಯುವುದಿಲ್ಲ.ಅವರು ಕೌಂಟಿ ಕ್ರಿಕೆಟ್ನಲ್ಲಿ ಆಡುವುದಕ್ಕೆ ಅನುಮತಿ ಕೇಳಿದ್ದು ನಾನು ವಿವರ ಕಳಿಸುವಂತೆ ಹೇಳಿದ್ದೇನೆ. ಅವರಿಗೆ ಆಡುವುದಕ್ಕೆ ಅವಕಾಶ ನೀಡಲು ತೀರ್ಮಾನಿಸಿದ್ದೇನೆ" ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ವಡೋದರದಿಂದ ತಿಳಿಸಿದ್ದಾರೆ. ನಮ್ಮ ಸ್ಥಳೀಯ ಕ್ರಿಕೆಟ್ ರಣಜಿ ಟ್ರೋಫಿಗೆ ಅಡ್ಡಿಯಾಗದಿದ್ದರೆ ನಾವು ಯಾವುದೇ ಆಟಗಾರನಿಗೆ ಕೌಂಟಿಯಲ್ಲಿ ಆಡಬಾರದೆಂದು ತಿಳಿಸಿಲ್ಲ ಎಂದು ಅವರು ಹೇಳಿದರು.
ನಾವು ಗೌತಮ್ ಗಂಭೀರ್ ಅವರಿಗೆ ಇಂಗ್ಲೀಷ್ ಕೌಂಟಿ ಕ್ರಿಕೆಟ್ನಲ್ಲಿ ಆಡುವುದಕ್ಕೆ ಅವಕಾಶ ನೀಡಿದ್ದೆವು ಎಂದು ಪಟೇಲ್ ಹೇಳಿದರು. ಪೂಜಾರ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿದ್ದು, ಜೊತೆಗೆ ವಿರಾಟ್ ಕೊಹ್ಲಿ ಯುವ ಬ್ಯಾಟಿಂಗ್ ಲೈನ್ ಅಪ್ ಬೆನ್ನೆಲುಬಾಗಿದ್ದರು. ಆದರೆ ಇಂಗ್ಲೆಂಡ್ನಲ್ಲಿ ಸ್ವಿಂಗ್ ಬೌಲಿಂಗ್ಗೆ ಅನುಕೂಲಕರವಾದ ಸ್ಥಿತಿಯಲ್ಲಿ ಆಡಲು ಅವರಿಬ್ಬರೂ ವಿಫಲರಾಗಿ ಟೀಕಾಪ್ರವಾಹ ಎದುರಿಸಿದ್ದಾರೆ.