ಮೋದಿ ಆದರ್ಶ: ಗ್ರಾಮವೊಂದನ್ನು ದತ್ತುಪಡೆದ ಮಾಸ್ಟರ್ ಬ್ಲಾಸ್ಟರ್

ಭಾನುವಾರ, 16 ನವೆಂಬರ್ 2014 (15:23 IST)
ಮಾಜಿ ಕ್ರಿಕೇಟಿಗ ,ಹಾಲಿ ರಾಜ್ಯ ಸಭಾ ಸದಸ್ಯ ಸಚಿನ್‌ ತೆಂಡುಲ್ಕರ್‌ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ದತ್ತು ಪಡೆದಿರುವ ಆಂಧ್ರದ ನೆಲ್ಲೂರಿನ ಪುಟ್ಟಮರಾಜ ಕಂಡ್ರಿಗ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದಾರೆ.
 
ಅನೇಕ ಸವಲತ್ತುಗಳಿಂದ ವಂಚಿತವಾಗಿರುವ ಕುಗ್ರಾಮವಾಗಿರುವ ಪುಟ್ಟಮರಾಜು ಕಂಡ್ರಿಗ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸುವುದಾಗಿ ಸಚಿನ್‌ ಮುಂದೆ ಬಂದಿದ್ದಾರೆ.
 
ಗ್ರಾಮಕ್ಕೆ ಭೇಟಿ ನೀಡಿರುವ ಸಚಿನ್‌ ಹಲವು ಅಭಿವೃದ್ದಿ ಕಾರ್ಯಕ್ರಮಗಳಿಗೆ ಶಂಕು ಸ್ತಾಪನೆ ನಡೆಸಿದ್ದಾರೆ.
 
ಗ್ರಾಮದ ಅಭಿವೃದ್ದಿಗೆ ಸಂಸದರ ನಿಧಿಯಿಂದ ನಾಲ್ಕು ಕೋಟಿ ಅನುದಾನ ನೀಡಿದ್ದಾರೆ. 
 
ಸಚಿನ್‌ ಅವರು ಗ್ರಾಮದ ರೈತರು, ಮಹಿಳೆಯರು ಮತ್ತು ಮಕ್ಕಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ