ಆದಾಗ್ಯೂ ಮಿಚೆಲ್ ಮಾರ್ಶ್ ಬೌಲಿಂಗ್ನಲ್ಲಿ ಧವನ್ 24 ರನ್ಗಳಾಗಿದ್ದಾಗ, ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು. ಜಾನ್ಸನ್ ಎಸೆತದಲ್ಲಿ ಮುರಳಿ ವಿಜಯ್ ಬ್ಯಾಟಿನ ತುದಿಗೆ ತಾಕಿ ಹಾರಿದ ಚೆಂಡನ್ನು ಹಿಡಿಯಲು ಶಾನ್ ಮಾರ್ಷ್ ವಿಫಲರಾಗಿದ್ದರಿಂದ ಮುರಳಿ ವಿಜಯ್ ಒಂದು ಜೀವದಾನ ಪಡೆದರು. ವಿಜಯ್ ಮತ್ತು ಚೇತೇಶ್ವರ್ ಪೂಜಾರ್ ಭೋಜನವಿರಾಮದ ವೇಳೆಗೆ ಕ್ರಮವಾಗಿ 46 ಮತ್ತು 15 ರನ್ಗಳೊಂದಿಗೆ ಆಡುತ್ತಿದ್ದಾರೆ.
25 ಓವರುಗಳಲ್ಲಿ ಕೇವಲ 8 ಬೌಂಡರಿಗಳನ್ನು ಹೊಡೆದಿದ್ದು ಭಾರತದ ಎಚ್ಚರಿಕೆಯ ಆಟಕ್ಕೆ ಮಾನದಂಡವಾಗಿದ್ದು, 8 ಬೌಂಡರಿಗಳ ಪೈಕಿ ವಿಜಯ್ 7 ಬೌಂಡರಿಗಳನ್ನು ಬಾರಿಸಿದ್ದಾರೆ. ಕೊನೆಯಲ್ಲಿ ಆಶಿಸ್ನ ನಾಥನ್ ಲೈಯಾನ್ ತನ್ನ ಆಫ್ಸ್ಪಿನ್ ಬೌಲಿಂಗ್ನಿಂದ ಪೂಜಾರಾ ತಿಣುಕಾಡುವಂತೆ ಮಾಡಿದರು.