ಟ್ರೋಫಿಗಾಗಿ 15 ಆಟಗಾರರ ಉತ್ತರ ವಲಯ ತಂಡದ ಆಯ್ಕೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ.
ತಂಡಕ್ಕೆ ಹರ್ಬಜನ್ ಸಿಂಗ್ ನಾಯಕತ್ವ ವಹಿಸಲಿದ್ದು, ಉತ್ತಮ ಸಾಧನೆ ತೋರಿದವರಿಗೆ ಸೂಕ್ತವಾಗಿ ಬಹುಮಾನಿಸಲು ರಾಷ್ಟ್ರೀಯ ಆಯ್ಕೆದಾರ ವಿಕ್ರಮ್ ರಾಥೌರ್ ನಿರ್ಧರಿಸಿದ್ದಾರೆ. ಆದರೆ ದೆಹಲಿಯ ಭರವಸೆಯ ಕಿರಿಯ ಆಟಗಾರರ ಹಾದಿಗೆ ಅಡ್ಡಬರಲು ತಾವು ಬಯಸುವುದಿಲ್ಲ ಎಂದು ಸೆಹ್ವಾಗ್ ಕೆಲವು ಡಿಡಿಸಿಎ ಅಧಿಕಾರಿಗಳಿಗೆ ಹೇಳಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಹ್ವಾಗ್ ಮತ್ತು ಗಂಬೀರ್ ಕ್ರಮವಾಗಿ 122 ಮತ್ತು 178 ರನ್ ಹೊಡೆದಿರುವುದು ಕೂಡ ಅವರ ಭವಿಷ್ಯ ಮಂಕಾಗಿಸಿದೆ. ಉತ್ತರವಲಯ ತಂಡದಲ್ಲಿ ಅನುಭವಿ ಆಟಗಾರರಾದ ಹರ್ಭಜನ್, ಯುವರಾಜ್ ಸಿಂಗ್, ಮೋಹಿತ್ ಶರ್ಮಾ ಮತ್ತು ಅಮಿತ್ ಮಿಶ್ರಾ ಬಿಟ್ಟರೆ ಉಳಿದವರೆಲ್ಲಾ ಕಿರಿಯ ಆಟಗಾರರು.