ಟೀಂ ಇಂಡಿಯಾಗೆ ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಸೇರ್ಪಡೆ

ಸೋಮವಾರ, 22 ಡಿಸೆಂಬರ್ 2014 (17:24 IST)
ಗುಜರಾತಿನ ಆಲ್‌ರೌಂಡರ್  ಅಕ್ಷರ್ ಪಟೇಲ್  ರವೀಂದ್ರ ಜಡೇಜಾ ಬದಲಿಗೆ ಆಸ್ಟ್ರೇಲಿಯಾದಲ್ಲಿ ಆಡುತ್ತಿರುವ ಭಾರತ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.  ಅಕ್ಷರ್ ಬಾಂಗ್ಲಾದೇಶದಲ್ಲಿ ಚೊಚ್ಚಲ ಆಟ ಆಡಿದಾಗಿನಿಂದ ಭಾರತದ ಪರ 9 ಏಕದಿನಗಳಲ್ಲಿ ಆಡಿದ್ದಾರೆ. ಆದರೆ ಕಿಂಗ್ಸ್ ಇಲೆವೆನ್ ಪರ ಐಪಿಎಲ್ 2014ರಲ್ಲಿ 17 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗಮನಸೆಳೆದರು.
 
 ಗುಜರಾತಿನ ಎಡಗೈ ಸ್ಪಿನ್ನರ್ ನಿಖರವಾಗಿ ಸ್ಟಂಪ್‌ನಿಂದ ಸ್ಟಂಪ್ ಬೌಲಿಂಗ್‌ಗೆ ಹೆಸರಾಗಿದ್ದು, ಫ್ಲೈಟ್ ಮೂಲಕ ಬ್ಯಾಟ್ಸ್‌ಮನ್‌ಗೆ ವಂಚಿಸುವುದಿಲ್ಲ. ಇದರಿಂದ 10 ಪ್ರಥಮ ದರ್ಜೆ ಪಂದ್ಯಗಳಲ್ಲಿ 32 ವಿಕೆಟ್ ಗಳಿಸಲು ಅವರಿಗೆ ನೆರವಾಗಿದೆ.

ಕಟಕ್ ಮತ್ತು ರಾಂಚಿಯಲ್ಲಿ ಶ್ರೀಲಂಕಾ ವಿರುದ್ಧ ಅವರ ಬ್ಯಾಟಿಂಗ್‌ ವಿರಾಟ್ ಕೊಹ್ಲಿ ಅವರ ಮೆಚ್ಚುಗೆಗೆ ಪಾತ್ರವಾಗಿತ್ತು. ಎರಡೂ ಪಂದ್ಯಗಳ ಗೆಲುವಿನಲ್ಲಿ ಅವರ ಪಾತ್ರವನ್ನು ಕೊಹ್ಲಿ ಶ್ಲಾಘಿಸಿದ್ದರು.ಭಾರತ ಈಗಾಗಲೇ 2-0ಯಿಂದ ಆಸ್ಟ್ರೇಲಿಯಾ ವಿರುದ್ಧ ಹಿನ್ನಡೆ ಗಳಿಸಿದ್ದು, ಬಾಕ್ಸಿಂಗ್ ದಿನದಂದು ಮೆಲ್ಬೋರ್ನ್‌ನಲ್ಲಿ ಮೂರನೇ ಟೆಸ್ಟ್ ಆಡಲಿದೆ. 

ವೆಬ್ದುನಿಯಾವನ್ನು ಓದಿ