‘ಅನಿಲ್ ಕುಂಬ್ಳೆ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ’

ಗುರುವಾರ, 22 ಜೂನ್ 2017 (08:34 IST)
ನವದೆಹಲಿ: ಅನಿಲ್ ಕುಂಬ್ಳೆಯಂತಹ ಒಬ್ಬ ದಿಗ್ಗಜನ ಸ್ಥಾನವನ್ನು ತುಂಬಲು ಇನ್ನೊಬ್ಬರಿಂದ ಸಾಧ್ಯವಿಲ್ಲ. ಅವರೊಬ್ಬ ಮೇಧಾವಿ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದಾರೆ.

 
‘ನಾನು ಅವರನ್ನು ಕೋಚ್ ಆಗಿ ನೋಡಿಲ್ಲ. ಆದರೆ ಒಬ್ಬ ಆಟಗಾರನಾಗಿ, ನಾಯಕನಾಗಿ ಅವರ ನಾಯಕತ್ವದಲ್ಲಿ ಆಡಿದ್ದೇನೆ. ನನ್ನ ಕಮ್ ಬ್ಯಾಕ್ ಆಗಿದ್ದೇ ಅವರ ನಾಯತಕ್ವದಲ್ಲಿ. ಅವರು ನಾಯಕನಾಗಿದ್ದ ಭಾರತ ತಂಡದ ಪ್ರದರ್ಶನ ಉತ್ತಮವಾಗಿತ್ತು. ಅವರ ಸ್ಥಾನಕ್ಕೆ ಯಾರೇ ಬಂದರೂ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ’ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಹಾಗಿದ್ದರೂ ಒಬ್ಬ ಕೋಚ್ ಆಗಿ ಅವರು ಹೇಗೆ ಎಂದು ನನಗೆ ಗೊತ್ತಿಲ್ಲ. ಆದರೆ ಒಬ್ಬ ಆಟಗಾರನಾಗಿ ಕುಂಬ್ಳೆಗೆ ಸರಿಸಾಟಿ ಬೇರಿಲ್ಲ ಎಂದು ಸೆಹ್ವಾಗ್ ಹೊಗಳಿದ್ದಾರೆ. ಇದೀಗ ಟೀಂ ಇಂಡಿಯಾ ಕೋಚ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೆಹ್ವಾಗ್ ಹೆಸರೂ ಇದೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ