‘ಟೀಂ ಇಂಡಿಯಾದಲ್ಲಿ ಧೋನಿಗೆ ಸಿಗುತ್ತಿರುವ ಗೌರವ ನಮಗೇಕಿಲ್ಲ?’
ಶುಕ್ರವಾರ, 26 ಮೇ 2017 (09:22 IST)
ಮುಂಬೈ: ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮೊನ್ನೆಯಷ್ಟೇ ತಮ್ಮನ್ನು ಮುಂಬೈ ಇಂಡಿಯನ್ಸ್ ತಂಡ ಫೈನಲ್ ಪಂದ್ಯದಲ್ಲಿ ಆಡಲು ಅವಕಾಶ ಕೊಡಲಿಲ್ಲ ಎಂದು ಹರಿಹಾಯ್ದಿದ್ದರು. ಇದೀಗ ಬಿಸಿಸಿಐ ವಿರುದ್ಧ ಅವರ ಸಿಟ್ಟು ಹೊರಹಾಕಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಬಹುದು ಎಂದು ಕಾದಿದ್ದ ಭಜಿಗೆ ಆಯ್ಕೆ ಸಮಿತಿ ನಿರಾಸೆ ಮೂಡಿಸಿತ್ತು. ಇದರಿಂದ ಭಜಿ ಪಿತ್ತ ನೆತ್ತಿಗೇರಿದೆ. ಹಿರಿಯ ಆಟಗಾರನಾದ ತನ್ನನ್ನು ಕಡೆಗಣಿಸಿದ್ದಕ್ಕೆ ಬಹಿರಂಗವಾಗಿಯೇ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
ಧೋನಿಯನ್ನು ಕೇವಲ ತಜ್ಞ ಬ್ಯಾಟ್ಸ್ ಮನ್ ಎಂದು ಮಾತ್ರವಲ್ಲ, ತಂಡಕ್ಕೆ ಬೇರೆ ರೀತಿಯಿಂದಲೂ ಕೊಡುಗೆ ನೀಡಬಹುದು ಎನ್ನುವ ಕಾರಣಕ್ಕೆ ಆಯ್ಕೆ ಮಾಡಿದ್ದಾರಂತೆ. ಅದೇ ಕೆಲಸವನ್ನು ನಾನೂ ಮಾಡಬಲ್ಲೆ. ಹಾಗಿದ್ದರೂ, ಧೋನಿಗೆ ಸಿಗುತ್ತಿರುವ ಗೌರವ ನಮಗೇಕಿಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ