ಟೀಂ ಇಂಡಿಯಾಗೆ ಕಾದಿದೆ ಮತ್ತೊಂದು ಕೆಟ್ಟ ಸುದ್ದಿ

ಶುಕ್ರವಾರ, 9 ಡಿಸೆಂಬರ್ 2016 (10:41 IST)
ಮುಂಬೈ: ಯಾಕೋ ಟೀಂ ಇಂಡಿಯಾ ಆಟಗಾರರು ಸರದಿಯಂತೆ ಗಾಯಗೊಳ್ಳುತ್ತಿದ್ದಾರೆ. ಗಾಯಗೊಂಡು ಮನೆಗೆ ಹೋದವರು ಯಾರೂ ಬೇಗ ತಂಡಕ್ಕೆ ಬರುವ ಸೂಚನೆ ಕಾಣುತ್ತಿಲ್ಲ.

ಲೇಟೆಸ್ಟ್ ಪಟ್ಟಿಗೆ ಸೇರಿದವರು ಅಜಿಂಕ್ಯ ರೆಹಾನೆ. ಮೂರನೇ ಟೆಸ್ಟ್ ನಲ್ಲಿ ಗಾಯಗೊಂಡಿದ್ದ ರೆಹಾನೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಈಗ ಅವರು ಏಕದಿನ ಪಂದ್ಯಗಳನ್ನೂ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದೆ.

ಬೆರಳಿಗೆ ಗಾಯ ಮಾಡಿಕೊಂಡಿದ್ದ ರೆಹಾನೆ ಗುಣಮುಖರಾಗಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ ಎನ್ನಲಾಗಿದೆ. ಈಗಾಗಲೇ ಸೀಮಿತ ಓವರ್ ಗಳ ಸ್ಪೆಷಲಿಸ್ಟ್ ಗಳಾದ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಗಾಯದ ಕಾರಣದಿಂದ ಇಂಗ್ಲೆಂಡ್ ಸರಣಿ ತಪ್ಪಿಸಿಕೊಳ್ಳಲಿದ್ದಾರೆ. ಅವರ ಜತೆಗೆ ರೆಹಾನೆ ಕೂಡಾ ಸೇರಿದ್ದು, ಭಾರತಕ್ಕೆ ಚಿಂತೆಯ ವಿಷಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ