ಹಿಂದೂಗಳ ಅವಹೇಳನ: ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನಕ್ಕೆ ನೆಟ್ಟಿಗರ ಆಗ್ರಹ

ಶನಿವಾರ, 5 ಡಿಸೆಂಬರ್ 2020 (10:21 IST)
ನವದೆಹಲಿ: ರೈತ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರ ಬೆನ್ನಿಗೆ ನಿಂತಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಹಿಂದೂಗಳ ವಿರುದ್ಧ ನೀಡಿರುವ ಹೇಳಿಕೆಯೊಂದು ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.


‘ಹಿಂದೂಗಳು ಹೇಡಿಗಳು. 100 ವರ್ಷ ಮುಘಲರ ಜೀತದಾಳುಗಳಾಗಿದ್ದರು’ ಎಂದು ಯೋಗರಾಜ್ ಹೇಳಿಕೆ ನೀಡಿರುವುದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿ ಕೋಮುಧ್ವೇಷ ಹರಡುವ ಹೇಳಿಕೆ ನೀಡಿದ್ದಕ್ಕೆ ಯೋಗರಾಜ್ ಸಿಂಗ್ ರನ್ನು ಬಂಧಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ರೈತರ ಪರ ರ್ಯಾಲಿಯಲ್ಲಿ ಅವರು ಈ ರೀತಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ