ರೈಲು ಯಾನದಲ್ಲಿ ಧೋನಿ ಹೇಗೆ ಕಾಲ ಕಳೆದರು ಗೊತ್ತಾ?

ಶುಕ್ರವಾರ, 24 ಫೆಬ್ರವರಿ 2017 (08:02 IST)
ರಾಂಚಿ: ಸದಾ ವಿಮಾನದಲ್ಲಿ ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಓಡಾಡುವ ಕ್ರಿಕೆಟಿಗರ ಪೈಕಿ ಧೋನಿ ಇತ್ತೀಚೆಗೆ ರೈಲಿನಲ್ಲಿ ಪ್ರಯಾಣ ಮಾಡಿ ಸುದ್ದಿ ಮಾಡಿದ್ದರು. ವಿಜಯ್ ಹಜಾರೆ ಟ್ರೋಫಿ ಆಡುವ ಜಾರ್ಖಂಡ್ ತಂಡದೊಂದಿಗೆ ಕೋಲ್ಕೊತ್ತಾಗೆ ರೈಲು ಪ್ರಯಾಣ ಮಾಡಿದ ಧೋನಿ ಕುರಿತು ಸ್ವಾರಸ್ಯಕರ ವಿವರಗಳು ಈಗ ಒಂದೊಂದಾಗಿ ಹೊರಬೀಳುತ್ತಿದೆ.

 
ರಾಂಚಿಯಲ್ಲಿ ಧೋನಿ ರೈಲು ಹತ್ತುತ್ತಿದ್ದಾರೆಂದಾಗಲೇ ಜನ ಅವರನ್ನು ನೋಡಲು ಮುಗಿಬಿದ್ದಿದ್ದರಂತೆ. ಇದು ಧೋನಿಯದೇಆಯ್ಕೆಯಾಗಿತ್ತು. ವಿಮಾನ ಟಿಕೆಟ್ ತಾವೇ ಬೇಡವೆಂದು ನಿರಾಕರಿಸಿದ್ದರು. ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ನಗು ನಗುತ್ತಲೇ ಕೈ ಬೀಸಿದರಂತೆ ಧೋನಿ.

ಕೆಲವು ವರ್ಷಗಳ ಹಿಂದೆ ಇದೇ ರೈಲ್ವೇಯಲ್ಲಿ ಕೆಲಸ ಮಾಡಿದ್ದ ಧೋನಿ ತಮ್ಮ ಜತೆ ಕೆಲಸ ಮಾಡಿದವರೆನ್ನೆಲ್ಲಾ ಹೆಸರು ಕೂಗಿ ಮಾತನಾಡಿಸಿದರು. ರೈಲು ಹತ್ತಿದ ಮೇಲೆ ತಡರಾತ್ರಿವರೆಗೂ ನಿದ್ದೆ ಮಾಡದೇ ಸಹ ಆಟಗಾರರೊಂದಿಗೆ ಮಾತನಾಡುತ್ತಾ, ತಮ್ಮ ಜತೆ ಸೆಲ್ಫೀ ತೆಗೆಯಲು ಬಯಸಿದ ಅಭಿಮಾನಿಗಳು, ತಿಂಡಿ ಸರಬರಾಜುದಾರರೊಂದಿಗೆ ಕಾಲ ಕಳೆದರು.

ಬೇಕೆನಿಸಿದಾಗಲೊಮ್ಮೆ ರೈಲಿನಿಂದ ಕೆಳಗಿಳಿದು ಚಹಾ ಸೇವಿಸಿ ಪಕ್ಕಾ ಸಾಮಾನ್ಯ ಪ್ರಯಾಣಿಕನಂತೆ ಖುಷಿಪಟ್ಟರು ಎಂದು ತಂಡದ ಮೂಲಗಳು ಹೇಳಿವೆ. ಅಂತೂ ಕ್ರಿಕೆಟ್ ಮೈದಾನದಲ್ಲಿ ಪ್ರಯೋಗ ಮಾಡುವ ಧೋನಿ ಇಲ್ಲೂ ತಮಗೆ ತೋಚಿದ್ದನ್ನೆಲ್ಲಾ ಮಾಡಿ ಸಾಮಾನ್ಯನ ಜೀವನದ ಖುಷಿ ಪಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ