ಜಮ್ಮು ಕಾಶ್ಮೀರ ಕ್ರಿಕೆಟಿಗರಿಗೆ ಧೋನಿ ಕೊಟ್ಟ ಸರ್ಪ್ರೈಸ್!

ಮಂಗಳವಾರ, 7 ಮಾರ್ಚ್ 2017 (09:50 IST)
ನವದೆಹಲಿ: ಧೋನಿ ಯಾವತ್ತೂ ಸರ್ಪ್ರೈಸ್ ಕೊಡುವುದರಲ್ಲಿ, ಯವ ಆಟಗಾರರ ಬೆನ್ನು ತಟ್ಟುವುದರಲ್ಲಿ ಸದಾ ಮುಂದು. ಹಾಗಿರುವ ಧೋನಿ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ ತನ್ನ ಜಾರ್ಖಂಡ್ ತಂಡದ ಎದುರಾಳಿಯಾಗಿದ್ದ ಜಮ್ಮು ಕಾಶ್ಮೀರ ತಂಡಕ್ಕೆ ಸರ್ಪ್ರೈಸ್ ಕೊಟ್ಟರು.

 
ಅದೇನದು ಎಂಬ ಕುತೂಹಲವೇ? ವಿಜಯ್ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ವಿರುದ್ಧ ಕಾಶ್ಮೀರ ತಂಡ ಸೋಲನುಭವಿಸಿತ್ತು. ಆದರೂ ಸೋಲಿನ ಹತಾಶೆಯಲ್ಲಿ ಕೂತಿದ್ದ ತನ್ನ ತಂಡದ ಆಟಗಾರರಿಗೆ ಧೋನಿಯಿಂದ ಪಾಠ ಹೇಳಿಸಿದರೆ ಹೇಗೆ ಎಂದು ಬೌಲರ್ ಪರ್ವೇಜ್ ರಸೂಲ್ ಗೆ ಅನಿಸಿತು. ಕಾಶ್ಮೀರದ ಕೆಲವು ಆಟಗಾರರಿಗೂ ಧೋನಿಯನ್ನು ಒಮ್ಮೆ ಭೇಟಿಯಾಗಿ ಮಾತನಾಡಬೇಕೆಂಬ ಆಸೆಯಿತ್ತು.

ಅದಕ್ಕಾಗಿ ಅವರು ಪಂದ್ಯ ಮುಗಿದ ಮೇಲೆ ತಮ್ಮ ಡ್ರೆಸ್ಸಿಂಗ್ ರೂಂಗೆ ಬರುವಂತೆ ಕೇಳಿಕೊಂಡರು. ಟೀಂ ಇಂಡಿಯಾದ ತನ್ನ ಸಹ ಆಟಗಾರನ ಮನವಿಗೆ ಸ್ಪಂದಿಸಿದ ಧೋನಿ ಆಟಗಾರರು ಇರುವಲ್ಲಿಗೇ ಬಂದು ಕೆಲವು ಸಲಹೆ ನೀಡಿದರು. ಇದುವರೆಗೆ ಟಿವಿಯಲ್ಲಿ ಧೋನಿಯನ್ನು ನೋಡಿ ಖುಷಿಪಟ್ಟಿದ್ದ ಆಟಗಾರರಿಗೆ ಇಂದು ಪ್ರತ್ಯಕ್ಷವಾಗಿ ನೋಡಿ ದಿಲ್ ಖುಷ್ ಆಯಿತಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ