ಮತ್ತೊಮ್ಮೆ ಸರಳತೆ ಮೆರೆದ ಧೋನಿ

ಸೋಮವಾರ, 27 ಫೆಬ್ರವರಿ 2017 (08:56 IST)
ಕೋಲ್ಕೊತ್ತಾ: ಮೊನ್ನೆಯಷ್ಟೇ ವಿಮಾನ ಯಾನ ನಿರಾಕರಿಸಿ ಸಾಮಾನ್ಯರಂತೆ ರೈಲಿನಲ್ಲಿ ಪ್ರಯಾಣಿಸಿ ಸುದ್ದಿ ಮಾಡಿದ್ದ ಕ್ರಿಕೆಟಿಗ ಧೋನಿ ಮತ್ತೊಮ್ಮೆ ಸರಳತೆ ಮೆರೆದು ಸುದ್ದಿಯಾಗಿದ್ದಾರೆ.


ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಕ್ಕೆ ತಮ್ಮ ತವರು ಜಾರ್ಖಂಡ್ ತಂಡದೊಂದಿಗೆ ರೈಲಿನಲ್ಲಿ ಪ್ರಯಾಣಿಸಿದ್ದ ಧೋನಿ ಸಾಮಾನ್ಯರಂತೇ ಕಳೆದು ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಭಾವಿ ಕ್ರಿಕೆಟಿಗನಾದರೂ, ಐಷಾರಾಮಿ ಸ್ಟಾರ್ ಹೋಟೆಲ್ ನ ವಾಸ್ತವ್ಯ ನಿರಾಕರಿಸಿ ಕೋಲ್ಕೊತ್ತಾ ಕ್ರಿಕೆಟ್ ಕ್ಲಬ್ ನ ಕೊಠಡಿಯಲ್ಲೇ ತಂಗುವ ಮೂಲಕ ಪ್ರಶಂಸೆಗೊಳಗಾಗಿದ್ದಾರೆ. ಇಲ್ಲೇ ಸಾಕಷ್ಟು ಅನುಕೂಲವಿರುವುದರಿಂದ ಐಷಾರಾಮಿ ಹೋಟೆಲ್ ನ ಅಗತ್ಯವಿಲ್ಲ ಎಂದು ಧೋನಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಆದರೆ ಅವರು ಅಲ್ಲಿ ಉಳಿದುಕೊಂಡಿದ್ದರಿಂದ ಅಭಿಮಾನಿಗಳನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಕೊಂಚ ಕಷ್ಟವಾಯಿತು ಬಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ