‘ಕೊಹ್ಲಿ-ಕುಂಬ್ಳೆ ನಾಟಕ ಸಾಕಾಗಿದೆ! ಧೋನಿಯೇ ಮತ್ತೆ ನಾಯಕನಾಗಲಿ’

ಗುರುವಾರ, 22 ಜೂನ್ 2017 (09:15 IST)
ಮುಂಬೈ: ಕೋಚ್ ಕುಂಬ್ಳೆ ಮತ್ತು ನಾಯಕ ಕೊಹ್ಲಿ ನಡುವಿನ ರಗಳೆ ಸುದ್ದಿ ಓದಿ ಸಾಕಾಗಿದೆ. ಇವರಿಬ್ಬರ ಸಹವಾಸವೇ ಬೇಡ. ಮತ್ತೆ ಕೂಲ್ ಕ್ಯಾಪ್ಟನ್ ಧೋನಿ ತಂಡದ ಚುಕ್ಕಾಣಿ ಹಿಡಿಯಲಿ!

 
ಹೀಗೆಂದು ಇದೀಗ ಅಭಿಮಾನಿಗಳ ಕಡೆಯಿಂದ ಒತ್ತಾಯ ಕೇಳಿ ಬಂದಿದೆ. ಕುಂಬ್ಳೆ ರಾಜೀನಾಮೆ ನೀಡಿದ ಮೇಲೆ ಅಭಿಮಾನಿಗಳು ಕೊಹ್ಲಿ ನಾಯಕತ್ವದ ಮೇಲೆ ಸಿಟ್ಟಾಗಿದ್ದಾರೆ. ಹೀಗಾಗಿ ಎಲ್ಲವನ್ನೂ ಸರಿದೂಗಿಸಿಕೊಂಡು ಸಾಗುವ ಧೋನಿ ನಾಯಕನಾಗಲಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಫೈನಲ್ ಸೋತಿರುವುದು ಅಭಿಮಾನಿಗಳ ಆಕ್ರೋಶ ಕೊಹ್ಲಿ ಮೇಲೆ ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ಕೊಹ್ಲಿಗೆ ಹೋಲಿಸಿದರೆ ಧೋನಿ ನೂರು ಪಾಲು ಉತ್ತಮ ನಾಯಕ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಧೋನಿ ಪರ ಅಭಿಯಾನವನ್ನೇ ಆರಂಭಿಸಿದ್ದಾರೆ.

ಕೊಹ್ಲಿಯನ್ನು ದುರಹಂಕಾರಿ ಎಂದು ಕರೆದಿರುವ ಅಭಿಮಾನಿಗಳು, ಅವರಿನ್ನೂ ನಾಯಕತ್ವ ನಿಭಾಯಿಸಲು ಪಕ್ವವಾಗಿಲ್ಲ ಎಂದಿದ್ದಾರೆ. ಕೊಹ್ಲಿ ಉತ್ತರಿಸುವವರೆಗೂ ಈ ಗೊಂದಲಗಳು ಇದ್ದೇ ಇದೆ ಬಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ