ಒಂದು ಕಡೆ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ 1-3 ಅಂತರದಿಂದ ಸೋತ ಬಳಿಕ ಹೊಸ ಶುಭಾರಂಭ ಮಾಡಲು ಮತ್ತು ಹಳೆಯ ಪ್ರತಿಷ್ಠೆಯನ್ನು ಮರಳಿ ಪಡೆಯಲು ಮೈದಾನಕ್ಕೆ ಇಳಿದರೆ, ಇನ್ನೊಂದು ಕಡೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ಗಾಗಿ ತಂಡ ಪ್ರಬಲವಾಗುವತ್ತ ಕೂಡ ಗಮನ ನೀಡಬೇಕಾಗಿದೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ಗೆ ಇನ್ನು ಆರು ತಿಂಗಳು ಬಾಕಿ ಇದೆ ಮತ್ತು ಇಂದಿನಿಂದ ಭಾರತೀಯ ತಂಡ ಯಾವುದೇ ಒನ್ಡೇ ಪಂದ್ಯವಾಡಿದರೆ 2011ರ ಗೆಲುವನ್ನು ರಕ್ಷಣೆಗಾಗಿ ಹೊಸ ಹೆಜ್ಜೆಯಿಟ್ಟಂತಾಗಲಿದೆ. ಟೀಮ್ ಇಂಡಿಯಾದ ಹತ್ತಿರ ವಿಶ್ವಕಪ್ಗಿಂತ ಮೊದಲು ಮೂರು ಒನ್ಡೇ ಸರಣಿಯಲ್ಲಿ ತನ್ನ ಆಟಗಾರರ ಪ್ರತಿಭೆ, ಸಾಮರ್ಥ್ಯವನ್ನು ಅಳೆಯುವಂತಹ ಸುವರ್ಣಾವಕಾಶವಿದೆ.
ಸಂಜು ಸ್ಯಾಮಸನ್ ಮತ್ತು ಕರ್ಣ ಶರ್ಮಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ತಂಡದಲ್ಲಿ ಹೆಚ್ಚುವರಿಯಾಗಿ ವಿಕೆಟ್ ಕೀಪರ್, ಬ್ಯಾಟ್ಸಮೆನ್, ಸ್ಪಿನರ್ ಬೌಲರ್ ಮತ್ತು ಆಲ್ರೌಂಡರ್ ಆಟಗಾರರ ಹುಡುಕಾಟದಲ್ಲಿರುವ ಆಯ್ಕೆ ಸಮಿತಿ ಯಾರಿಗೆ ಅವಕಾಶ ಕೊಡುತ್ತದೆಯೋ ಎನ್ನುವ ಬಗ್ಗೆ ಕಾದು ನೋಡಬೇಕಾಗಿದೆ.